ಪಾಕ್ ವಿರುದ್ಧದ ಏಷ್ಯಾಕಪ್ (Asia Cup)ಹೋರಾಟದಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ 11 ಬಗ್ಗೆ ಸಾಕಷ್ಟು ಕುತೂಹಲವಿತ್ತು. ಕೆ.ಎಲ್.ರಾಹುಲ್ (KL Rahul) ಜಾಗ ಯಾವುದು? ದಿನೇಶ್ ಕಾರ್ತಿಕ್ರನ್ನು ಆಡಿಸುವುದು ಎಲ್ಲಿ? ರಿಷಬ್ ಪಂತ್ (Rishab Pant) ಕಥೆಯೇನು ಅನ್ನುವ ಬಗ್ಗೆ ಚರ್ಚೆ ಜೋರಾಗಿತ್ತು. ಆದರೆ ಟಾಸ್ ವೇಳೆ ಭಾರತ ಅಚ್ಚರಿ ನಿರ್ಧಾರ ಮಾಡಿತ್ತು. ರಾಹುಲ್ರನ್ನು ಓಪನರ್ ಆಗಿ ಉಳಿಸಿಕೊಂಡಿತ್ತು. ಕಾರ್ತಿಕ್ ಕೈಗೆ ವಿಕೆಟ್ ಕೀಪಿಂಗ್ ಗ್ಲೌಸ್ ನೀಡಿ ರಿಷಬ್ ಪಂತ್ರನ್ನು ತಂಡದಿಂದ ಹೊರಗಿಟ್ಟಿತ್ತು.
ಟೀಮ್ ಇಂಡಿಯಾದ ಈ ನಿರ್ಧಾರದ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಶುರುವಾಗಿವೆ. ರಾಹುಲ್ ಸ್ಥಾನದಲ್ಲಿ ಪಂತ್ ಆಡಬೇಕಿತ್ತು ಅನ್ನುವ ಮಾತು ಹುಟ್ಟಿಕೊಂಡಿದೆ. ರಾಹುಲ್ ಗಾಯದಿಂದ ಚೇತರಿಸಿಕೊಂಡ ಬಳಿಕ ಸರಿಯಾದ ಲಯ ಕಂಡುಕೊಂಡಿಲ್ಲ. ಪಾಕ್ ವಿರುದ್ಧದ ಪಂದ್ಯದಲ್ಲೂ ರಾಹುಲ್ ಮೊದಲ ಎಸೆತದಲ್ಲೇ ಔಟಾಗಿದ್ದರು. ಅಷ್ಟೇ ಅಲ್ಲ ರಾಹುಲ್ ಸೆಟಲ್ ಆಗಿ ವೇಗದ ಆಟ ಆಡುವವರು. ಮೊದಲ ಬಾಲ್ನಿಂದಲೇ ಬೌಂಡರಿ, ಸಿಕ್ಸರ್ ಅಟ್ಟುವ ಆಟಗಾರ ಅಲ್ಲ ಅನ್ನುವ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆ ಇದೆ.
ರಿಷಬ್ ಪಂತ್ ಆಯ್ಕೆಯ ಬಗ್ಗೆಯೂ ಮಾತಿದೆ. ಪಂತ್ ಸೇರ್ಪಡೆಯಿಂದ ಲೆಫ್ಟ್-ರೈಟ್ ಕಾಂಬಿನೇಷನ್ ಸಿಗುತ್ತದೆ. ಅಷ್ಟೇ ಅಲ್ಲ ಪಂತ್ರನ್ನು ಓಪನಿಂಗ್ನಿಂದ ಹಿಡಿದು ಯಾವ ಕ್ರಮಾಂಕದಲ್ಲಿ ಬೇಕಾದರೂ ಆಡಿಸಬಹುದು. ಮೊದಲ ಎಸೆತದಲ್ಲೇ ಸಿಕ್ಸರ್, ಬೌಂಡರಿ ಬಾರಿಸುವ ತಾಕತ್ತು ಈತನಿಗಿದೆ. ಟೀಮ್ ಇಂಡಿಯಾದಲ್ಲಿ ಎಡಗೈ ಆಟಗಾರರ ಕೊರತೆಯೂ ಇರುವುದರಿಂದ ಪಂತ್ ಆಡುವ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಚರ್ಚೆ ನಡೆಯುತ್ತಿದೆ.
ಒಟ್ಟಿನಲ್ಲಿ ಪಂತ್ ಮತ್ತು ರಾಹುಲ್ ಒಬ್ಬರೂ ಒಟ್ಟಿಗೆ ಆಡಬೇಕು ಅನ್ನುವ ಮಾತೂ ಇದೆ. ಆದರೆ ಸದ್ಯದ ಮಟ್ಟಿಗೆ ಟೀಮ್ ಇಂಡಿಯಾ ಈ ಇಬ್ಬರು ಆಟಗಾರರಿಗೆ ಏಕ ಕಾಲದಲ್ಲಿ ಅವಕಾಶ ಕೊಡಬೇಕಾದರೆ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಿ