ಆಲೂರು ಮೈದಾನದಲ್ಲಿ ಬೌಲರ್ಗಳದ್ದೇ ಆಟವಾಗಿದೆ. ಒಂದೊಂದು ರನ್ಗೂ ಬ್ಯಾಟ್ಸ್ಮನ್ಗಳು ಪರದಾಡಿದ್ದಾರೆ. 2ನೇ ದಿನ ಮೊದಲ ಇನ್ನಿಂಗ್ಸ್ನ ಆಟ ಮುಂದುವರೆಸಿದ ಕರ್ನಾಟಕಕ್ಕೆ ಶ್ರೇಯಸ್ ಗೋಪಾಲ್ ಸಿಡಿಸಿದ ಅಜೇಯ 56 ರನ್ಗಳು ಮಹತ್ವದ್ದಾಗಿತ್ತು. ಕರ್ನಾಟಕ 253 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಉತ್ತರ ಪ್ರದೇಶ ಪರ ಸೌರಬ್ ಕುಮಾರ್ 4 ಹಾಗೂ ಶಿವಂ ಮಾವಿ 3 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ ಕರ್ನಾಟಕದ ಬಗಿ ದಾಳಿ ಮುಂದೆ 155 ರನ್ಗಳಿಗೆ ಆಲೌಟ್ ಆಯಿತು. ಯುಪಿ ಪರ ಪ್ರಿಯಂ ಗರ್ಗ್ 39,ರಿಂಕು ಸಿಂಗ್ 33 ಹಾಗೂ ಶಿವಂ ಮಾವಿ 32 ರನ್ಗಳಿಸಿದ್ದು ಬಿಟ್ಟರೆ ಉಳಿದವರಿಂದ ಎರಡಂಕಿ ಕೊಡುಗೆ ಬರಲಿಲ್ಲ. ಕರ್ನಾಟಕ ಪರ ರೋನಿತ್ ಮೋರೆ 3, ವೈಶಾಖ್, ಗೌತಮ್ ಹಾಗೂ ವಿದ್ಯಾಧರ್ ಪಾಟೀಲ್ ತಲಾ 2 ವಿಕೆಟ್ ಪಡೆದರು.
98 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆಟ ಆರಂಭಿಸಿದ ಕರ್ನಾಟಕ ಮತ್ತೆ ಎಡವಿತು. ಸಮರ್ಥ್ 11, ಅಗರ್ವಾಲ್ 22, ಕರುಣ್ ನಾಯರ್ 10, ಸಿದ್ಧಾರ್ಥ್ 15 ರನ್ಗಳಿಸಿ ಔಟಾದರು. ನಾಯಕ ಮನೀಷ್ ಪಾಂಡೆ 4, ಗೌತಮ್ 1, ವೈಶಾಖ್5 ಹಾಗೂ ಶ್ರೇಯಸ್ ಗೋಪಾಲ್ 3 ರನ್ಗಳಿಸಿ 2ನೇ ಇನ್ನಿಂಗ್ಸ್ನಲ್ಲಿ ಔಟಾಗಿದ್ದಾರೆ. ಸೌರಭ್ ಕುಮಾರ್ 3 ವಿಕೆಟ್ಪಡೆದಿದ್ದಾರೆ. ಶರತ್ ಶ್ರೀನಿವಾಸ್ ಅಜೇಯ 10 ರನ್ಗಳಿಸಿ 3ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಕರ್ನಾಟಕ 2ನೇ ಇನ್ನಿಂಗ್ಸ್ನಲ್ಲಿ 100 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿದೆ. ಒಟ್ಟಾರೆ ಮುನ್ನಡೆ ಕೇವಲ 198 ರನ್ ಮಾತ್ರ ಆಗಿದೆ.