ಮಾರ್ಚ್ 29 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ನಾಯಕ ಕೇನ್ ವಿಲಿಯಮ್ಸನ್ ಕ್ಯಾಚ್ ನೀಡಿದ ಮೂರನೇ ಅಂಪೈರ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ದೂರು ದಾಖಲಿಸಿದೆ. ದೇವದತ್ ಪಡಿಕ್ಕಲ್ ಹಿಡಿದ ಈ ಕ್ಯಾಚ್ ಕುರಿತು ಮೂರನೇ ಅಂಪೈರ್ ನಿರ್ಧಾರಕ್ಕೆ ಸಂಬಂಧಿಸಿದಂತೆ ಆರಂಭದಿಂದಲೂ ವಿವಾದವಿತ್ತು. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಸೋಲನುಭವಿಸಬೇಕಾಯಿತು.
ಮೂರನೇ ಅಂಪೈರ್ ನಿರ್ಧಾರಕ್ಕೆ ಸಂಬಂಧಿಸಿದಂತೆ ಪಂದ್ಯದ ಬಳಿಕ ತಂಡದ ಕೋಚ್ ಟಾಮ್ ಮೂಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಥರ್ಡ್ ಅಂಪೈರ್ ನಿರ್ಧಾರದಿಂದ ನಮಗೆ ಆಶ್ಚರ್ಯವಾಗಿದೆ ಎಂದು ಪಂದ್ಯದ ನಂತರ ಹೇಳಿದರು. ಟಿವಿ ರಿಪ್ಲೇಗಳಲ್ಲಿ ನೋಡಿದಂತೆ, ಚೆಂಡು ಮೊದಲೇ ನೆಲಕ್ಕೆ ಅಪ್ಪಳಿಸಿತ್ತು. ಬಳಿಕ ಅದು ಆಟಗಾರನ ಕೈ ಸೇರಿತು.
ಏನಾಗಿತ್ತು
ಮಂಗಳವಾರ ನಡೆದ ಪಂದ್ಯದಲ್ಲಿ ಹಿಡಿದ ಕ್ಯಾಚ್ಗಾಗಿ ರಾಜಸ್ಥಾನ ಮತ್ತು ಹೈದರಾಬಾದ್ ನಡುವೆ ವಾಗ್ವಾದ ನಡೆದಿತ್ತು. ಇನ್ನಿಂಗ್ಸ್ನ ಎರಡನೇ ಓವರ್ ಮಾಡಲು ರಾಯಲ್ ನ ಪ್ರಸಿದ್ಧ ಕೃಷ್ಣ ಬಂದರು. ಓವರ್ನ ನಾಲ್ಕನೇ ಎಸೆತವು ವಿಲಿಯಮ್ಸನ್ ಅವರ ಬ್ಯಾಟ್ನ ಅಂಚನ್ನು ಮುತ್ತಿಟ್ಟು, ನೇರವಾಗಿ ವಿಕೆಟ್ಕೀಪರ್ ಸಂಜು ಸ್ಯಾಮ್ಸನ್ ಕೈಗೆ ಹೋಯಿತು, ಆದರೆ ಸಂಜು ಅವರಿಂದ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಸಂಜು ಬಿಟ್ಟ ಕ್ಯಾಚನ್ನು ಮೊದಲ ಸ್ಲಿಪ್ನಲ್ಲಿ ನಿಂತಿದ್ದ ದೇವದತ್ ಪಡಿಕಲ್ ಕ್ಯಾಚ್ ಪಡೆದರು.
ದೇವದತ್ ಚೆಂಡನ್ನು ನೆಲಕ್ಕೆ ಅಪ್ಪಳಿಸುವ ಮುನ್ನವೇ ಹಿಡಿದಿದ್ದಾರೋ ಇಲ್ಲವೋ ಎಂಬ ಬಗ್ಗೆ ಅನುಮಾನವಿತ್ತು. ಫೀಲ್ಡ್ ಅಂಪೈರ್ ಸಾಫ್ಟ್ ಡಿಸಿಜನ್ ಔಟ್ ಎಂದು ನೀಡಿದರು. ಮೂರನೇ ಅಂಪೈರ್ ತೀರ್ಪನ್ನು ನೀಡುವಂತೆ ಮೈದಾನದ ಅಂಪೈರ್ ಕೇಳಿಕೊಂಡರು. ಮೂರನೇ ಅಂಪೈರ್ ಪ್ರತಿ ಕೋನದಿಂದ ದೃಶ್ಯವನ್ನು ನೋಡಿದ ಔಟ್ ಎಂದು ತಿಳಿಸಿದರು.
ಚೆಂಡು ನೆಲಕ್ಕೆ ತಾಗುತ್ತಿರುವುದು ವೀಡಿಯೊದ ಮೊದಲ ಫ್ರೇಮ್ನಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ನಿರ್ಧಾರದ ಬಗ್ಗೆ ಸದ್ದು ಮಾಡಿತ್ತು. ಅಲ್ಲದೆ ಔಟ್ ಅಥವಾ ನಾಟ್ ಔಟ್ ಎಂಬ ಚರ್ಚೆ ನಡೆದಿದೆ. ವಿಲಿಯಮ್ಸನ್ ಅವರ ವಿಕೆಟ್ ಹೈದರಾಬಾದ್ಗೆ ಬಹಳಷ್ಟು ಮಹತ್ವದಾಗಿತ್ತು. ಅವರು ತಮ್ಮ ಬ್ಯಾಟಿಂಗ್ನಿಂದ ಯಾವುದೇ ಪಂದ್ಯದ ಗತಿಯನ್ನು ತಿರುಗಿಸಬಲ್ಲರು.