ಭಾರತದ ಸಿದ್ದಾರ್ಥ್ ರಾವತ್ ಐಟಿಎಫ್ ಮೈಸೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ಪ್ರವೇಶಿಸಿದ್ದಾರೆ.
ಇಲ್ಲಿನ ಮೈಸೂರು ಟೆನಿಸ್ ಕ್ಲಬ್ನಲ್ಲಿ ನಡೆದ ಪುರುಷರ ಸಿಂಗಲ್ಸ್ನಲ್ಲಿ ಸಿದ್ದಾರ್ಥ್ ರಾವತ್ಯುಎಸ್ನ ಡಾಲಿ ಬ್ಲಾಂಚ್ ಅವರನ್ನು 6-3,6-2 ಅಂಕಗಳಿಂದ ಮಣಿಸಿ ಪ್ರಿ ಕ್ವಾರ್ಟರ್ ಪ್ರವೇಶಿಸಿದರು.
ಟೂರ್ನಿಯಲ್ಲಿ ಏಳನೆ ಶ್ರೇಯಾಂಕಿತ ಆಟಗಾರನಾಗಿರುವ ಸಿದ್ದರ್ಥ್ ರಾವತ್ ಅದ್ಭುತ ಆಟ ಮತ್ತು ಅತ್ಯುತ್ತಮ ಸರ್ವ್ಗಳನ್ನು ಪಂದ್ಯ ಗೆದ್ದರು.
ರಾವತ್ ಜತೆಗೆ ಭಾರತದ ಇಷ್ಕ್ ಇಕ್ಬಾಲ್. ಫೈಸಲ್ ಕ್ವಾಮರ್ ಮತ್ತು ಕರಣ್ ಸಿಂಗ್ ಕೂಡ 16ರ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಇಷ್ಕ್ ಸೂರಜ್ ಪ್ರಬೋ ಅವರನ್ನು 7-6(4), 6-0 ಅಂಕಗಳಿಂದ ಸೋಲಿಸಿದರು. ಫೈಸಲ್ ಎದುರಾಳಿ ರಿಷಿ ರೆಡ್ಡಿ ಅವರನ್ನು 6-1, 6-1 ಅಂಕಗಳಿಂದ ಮಣಸಿದರು. ಕರಣ್ ಕಜಕಿಸ್ತಾನದ ಗ್ರಿಗೊರಿ ಲೊಮಕಿನ್ ಅವರನ್ನು 6-3,3-6,7-6 (3) ಅಂಕಗಳಿಂದ ಸೋಲಿಸಿದರು.
ಡಬಲ್ಸ್ನಲ್ಲೂ ಭಾರತೀಯ ಆಟಗಾರರು ಪ್ರಿಕ್ವಾರ್ಟರ್ ಪ್ರವೇಶಿಸಿದ್ದಾರೆ.