Irani Trophy: ಸಂಕಷ್ಟದಲ್ಲಿ ಸೌರಾಷ್ಟ್ರ
ರಣಜಿ ಟ್ರೋಫಿ ಚಾಂಪಿಯನ್ ಸೌರಾಷ್ಟ್ರ ರೆಸ್ಟ್ ಆಫ್ ಇಂಡಿಯಾ ವಿರುದ್ಧ ರಾಜಕೋಟ್ ನಲ್ಲಿ ನಡೆಯುತ್ತಿರುವ ಇರಾನಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
ಶನಿವಾರ 125 ರನ್ಗಳೊಂದಿಗೆ ಆಡುತ್ತಿದ್ದ ಸರ್ಫರಾಜ್ ಖಾನ್ ಭಾನುವಾರ ತಮ್ಮ ವೈಯಕ್ತಿಕ ಮೊತ್ತ 138 ರನ್ ಆಗಿದ್ದಾಗ ಔಟ್ ಆದರು. ನಾಯಕ ಹನುಮ್ ವಿಹಾರಿ 82 ರನ್ಗಳಾಗಿದ್ದಾಗ ಚಿರಾಗ್ ಜಾನಿ ಅವರಿಗೆ ವಿಕೆಟ್ ಒಪ್ಪಿಸಿದರು.
ಮುಂದೆ ಸೌರಭ್ ಕುಮಾರ್ ಆಕರ್ಷಕ 55 ರನ್ ಮಾಡಿ ತಂಡದ ಮೊತ್ತ 374 ಕ್ಕೆ ಮುಟ್ಟುವಲ್ಲಿ ಪ್ರಮುಖ ಪಾತ್ರವನ್ನಾಡಿದರು. ಉಳಿದಂತೆ ಜಯಂತ್ ಯಾದವ್ 37 ರನ್ ಮಾಡಿದರು.
ಸೌರಾಷ್ಟ್ರ ಪರ ಚೇತನ್ ಸಕಾರಿಯಾ 93 ಕ್ಕೆ ಐದು ವಿಕೆಟ್ ಉರುಳಿಸಿ ಯಶಸ್ಸಿ ಬೌಲರ್ ಎನಿಸಿದರು. ಚಿರಾಗ್ ಜಾನಿ 58 ಕ್ಕೆ ಎರಡು ಹಾಗೂ ಜೈದೇವ್ ಉನದ್ಕತ್ 100 ಕ್ಕೆ ಎರಡು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ನಲ್ಲಿ 276 ರನ್ ಹಿನ್ನಡೆ ಅನುಭವಿಸಿರುವ ಸೌರಾಷ್ಟ್ರ ಎರಡನೇ ದಿನದ ಅಂತ್ಯದಲ್ಲಿ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 49 ರನ್ ಮಾಡಿ ಸೋಲಿನ ಭೀತಿ ಎದುರಿಸುತ್ತಿದೆ. ದಿನದ ಅಂತ್ಯದಲ್ಲಿ ಚಿರಾಗ್ ಜಾನಿ 3 ಹಾಗೂ ಧರ್ಮೆಂದರ್ಸಿಂಹ ಜಡೇಜಾ 8 ರನ್ಗಳೊಂದಿಗೆ ಬ್ಯಾಟ್ ಮಾಡುತ್ತಿದ್ದರು.
ಆರಂಭಿಕ ಆಟಗಾರರಾದ ಹಾರ್ವಿಕ್ ದೇಸಾಯಿ 20 ಹಾಗೂ ಸ್ನೆಲ್ ಪಟೇಲ್ 16 ರನ್ ಮಾಡಿ ಸೌರಭ್ ಕುಮಾರ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.
ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಸೌರಭ್ ಕುಮಾರ್ ಎಸೆದ ನಾಲ್ಕೂ ಓವರ್ಗಳನ್ನು ಮೆಡನ್ ಆಗಿದ್ದು, ಇವರು ಎರಡು ವಿಕೆಟ್ ಪಡೆದಿದ್ದಾರೆ.
ಇದಕ್ಕೂ ಮುನ್ನ ಸೌರಾಷ್ಟ್ರ ತಂಡದ ಪ್ರಥಮ ಇನ್ನಿಂಗ್ಸ್ ಅನ್ನು ಕೇವಲ 98 ರನ್ಗೆ ನಿಯಂತ್ರಿಸಿ, ಮೊದಲ ದಿನದ ಅಂತ್ಯದಲ್ಲಿ ಮೂರು ವಿಕೆಟ್ ನಷ್ಟಕ್ಕೆ 205 ರನ್ ಮಾಡಿದ್ದ ರೆಸ್ಟ್ ಆಫ್ ಇಂಡಿಯಾ, ಎರಡನೇ ದಿನ ಮುಂಜಾನೆ ತನ್ನ ಆಟ ಮುಂದುವರಿಸಿ 374 ರನ್ಗೆ ತನ್ನ ಪ್ರಥಮ ಇನ್ನಿಂಗ್ಸ್ ಕೊನೆಗೊಳಿಸಿತು.
Irani Trophy, Saurashtra, Rest of Indial,