ಈ ಬಾರಿಯ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಸ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 10 ವಿಕೆಟ್ಗಳ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೇ, ಸೋಲಿಗೆ ಯಾವ ಆಟಗಾರರು ಪ್ರಮುಖ ಕಾರಣ ಅನ್ನುವ ಚರ್ಚೆ ಕೂಡ ನಡೆಯುತ್ತಿದೆ. ಸೆಮಿಫೈನಲ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಟಾಪ್ ಐವರು ಆಟಗಾರರ ಪಟ್ಟಿ ಇಲ್ಲಿದೆ.
ರೋಹಿತ್ ಶರ್ಮಾ: T20 ವಿಶ್ವಕಪ್ ಆರಂಭದಿಂದಲೂ ಪವರ್ಪ್ಲೇ ಓವರ್ಗಳಲ್ಲಿ ಹೆಚ್ಚು ರನ್ ಗಳಿಸುವ ಉದ್ದೇಶದ ಬಗ್ಗೆ ಅನೇಕ ಮಾತುಕತೆಗಳು ನಡೆದವು. ಆದರೂ, ಸೆಮಿಫೈನಲ್ ಪಂದ್ಯದಲ್ಲಿ ನಾಯಕ ರೋಹಿತ್ ಕಳಪೆ ಪ್ರದರ್ಶನ ನೀಡಿದರು. 28 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ ಕೇವಲ 27 ರನ್ ಗಳಿಸಿದರು. ಬ್ಯಾಟಿಂಗ್ ಆರಂಭಿಸುವ ಮುನ್ನ ಮುಂಬೈಕರ್ ಯಾವುದೇ, ಯೋಜನೆ ಸಿದ್ಧಪಡಿಸಿಕೊಂಡಿರಲಿಲ್ಲ ಎನ್ನುವ ಆರೋಪವೂ ಕೇಳಿಬರುತ್ತಿದೆ
ನಾಯಕನಾಗಿ ರೋಹಿತ್ ಫೇಲ್: ಬ್ಯಾಟರ್ ಆಗಿ ಮಾತ್ರವಲ್ಲ ನಾಯಕನಾಗಿಯೂ ರೋಹಿತ್ ವೈಫಲ್ಯ ಅನುಭವಿಸಿದರು. ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ನಾಯಕ ಸಾಕಷ್ಟು ಎಡವಿದರು. ಚಾಹಲ್ ಅಥವಾ ಅಶ್ವಿನ್ ಅವರನ್ನು ಆಯ್ಕೆ ಮಾಡುವುದು, ರಿಷಬ್ ಪಂತ್ ಅಥವಾ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡುವ ವಿಷಯದಲ್ಲಿ ಗೊಂದಲಕ್ಕೀಡಾದರು.
ಕೆಎಲ್ ರಾಹುಲ್: ಕೆಎಲ್ ರಾಹುಲ್ ಮೊದಲ ಮೂರು ಪಂದ್ಯಗಳಲ್ಲಿ ಒಂದೇ ಅಂಕೆಗಳನ್ನು ಗಳಿಸಿದರು. ನಂತರ ಪಂದ್ಯವನ್ನು ಗೆಲ್ಲಲು ಭಾರತದ ಮೇಲೆ ಯಾವುದೇ ಒತ್ತಡವಿಲ್ಲದ ಪಂದ್ಯಗಳಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಬಾರಿಸಿದರು. ಆದರೆ, ಮಹತ್ವದ ಸೆಮಿಫೈನಲ್ನಲ್ಲಿ, ಅವರು ಐದು ಎಸೆತಗಳಲ್ಲಿ ಐದು ರನ್ ಗಳಿಸುವ ಮೂಲಕ ಒತ್ತಡದ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ವಿಫಲರಾದರು.
ಆರ್ ಅಶ್ವಿನ್: ಯುವೇಂದ್ರ ಚಾಹಲ್ ಬದಲಿಗೆ ಆರ್ ಅಶ್ವಿನ್ ಆಯ್ಕೆ ಮಾಡಿದ್ದೆ ತಂಡಕ್ಕೆ ಕಂಟಕವಾಯಿತು. ಅಶ್ವಿನ್ ರೆಡ್ ಬಾಲ್ನಲ್ಲಿ ಉತ್ತಮ ಕ್ರಿಕೆಟಿಗರಾಗಿದ್ದಾರೆ. ಆದರೆ 2021 ರ T20 WCನಲ್ಲಿ ಮಧ್ಯಮ ಓವರ್ಗಳಲ್ಲಿ ವಿಕೆಟ್ ಪಡೆಯಲು ಪರದಾಡಿದರು. ಅಲ್ಲದೆ, ಹೆಚ್ಚು ಡಾಟ್ ಬಾಲ್ ಮಾಡಿ ಎದುರಾಳಿ ತಂಡವನ್ನು ಕಟ್ಟಿಹಾಕಬೇಕಿದ್ದ ಅವರು, ದುಬಾರಿ ಸ್ಪಿನ್ನರ್ ಆಗಿ ಹೊರಹೊಮ್ಮಿದರು.