ಟೀಮ್ ಇಂಡಿಯಾದಲ್ಲಿ ಭಿನ್ನಾಭಿಪ್ರಯಾ ಹೊಸತಲ್ಲ. ಕಪಿಲ್ ದೇವ್ ಕಾಲದಿಂದಲೂ ತಂಡದೊಳಗೆ ಸೈಲೆಂಟ್ ಜಗಳ ಇತ್ತು. ಅಜರುದ್ದೀನ್ ನಾಯಕನಾದ ಮೇಲೂ ಮುಸುಕಿನ ಗುದ್ದಾಟವಿತ್ತು. ಆದರೆ ಅವೆಲ್ಲವೂ ಅಲ್ಲಲ್ಲಿಗೆ ಮುಗಿಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾದ ಒಳಗಿನ ಗುಟ್ಟು ಒಂದಾಂದಾಗೇ ಹೊರ ಬರುತ್ತಿದೆ. ಸೌರವ್ ಗಂಗೂಲಿಯಿಂದ ಹಿಡಿದು, ವಿರಾಟ್, ರೋಹಿತ್ ತನಕದ ಹೈಪ್ರೊಫೈಲ್ ಫೈಟ್ ಗುಟ್ಟಾಗಿ ಉಳಿದಿಲ್ಲ.
ಚಾಪೆಲ್ ಪ್ರಹಸನ, 2007ರ ವಿಶ್ವಕಪ್ ಬಳಿಕ ಕೋಚ್ಗೆ ಗೇಟ್ ಪಾಸ್..!
ಟೀಮ್ ಇಂಡಿಯಾದ ನಾಯಕನಾಗಿದ್ದಿದ್ದು ಸೌರವ್ ಗಂಗೂಲಿ. 2003ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಫೈನಲ್ಗೆ ಬಂದು ಮುಗ್ಗರಿಸಿತ್ತು. ದಾದಾ ಕ್ಯಾಪ್ಟನ್ಸಿ ಮೇಲೆ ಸಖತ್ ಕಾನ್ಫಿಡೆನ್ಸ್ ಇತ್ತು. ಆಗ ಎಂಟ್ರಿಯಾಗಿದ್ದೇ ಗ್ರೆಗ್ ಚಾಪೆಲ್. ಟೀಮ್ ಇಂಡಿಯಾದ ಗುರುವಾದ ಚಾಪೆಲ್ ನಾಯಕತ್ವವನ್ನು ರಾಹುಲ್ ದ್ರಾವಿಡ್ ಹೆಗಲೇರಿಸಿದರು. ಅಷ್ಟೇ ಅಲ್ಲ ಗಂಗೂಲಿಯನ್ನು ತಂಡದಿಂದ ಕೈ ಬಿಟ್ಟರು. 2007ರ ಏಕದಿನ ವಿಶ್ವಪ್ನಲ್ಲಿ ಟೀಮ್ ಇಂಡಿಯಾ ಮೊದಲ ಸುತ್ತಿನಿಂದಲೇ ಹೊರಬಿತ್ತು. ಗಂಗೂಲಿ ಮತ್ತು ಸಚಿನ್ ಗುರು ಗ್ರೆಗ್ ಚಾಪೆಲ್ ಮೇಲೆ ಕೆಂಡಕಾರಿದರು. ಬಿಸಿಸಿಐ ಚಾಪೆಲ್ಗೆ ಗೇಟ್ ಪಾಸ್ ನೀಡಿ ತಂಡದಲ್ಲಿ ಶಾಂತಿ ಕಾಪಾಡಿತು.
ಫೀಲ್ಡಿಂಗ್ ಫಿಟ್ನೆಸ್, ಧೋನಿ ವಿರುದ್ಧ ಸೆಹ್ವಾಗ್ ಗರಂ
ಟೀಮ್ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಆಗಿ ಮಹೇಂದ್ರ ಸಿಂಗ್ ಧೋನಿ ಉತ್ತುಂಗದಲ್ಲಿದ್ದರು. ಆದರೆ ಸೆಹ್ವಾಗ್ರಂತಹ ಸೀನಿಯರ್ಗಳ ಮೇಲೆ ಧೋನಿಗೆ ಒಲವು ಇರಲಿಲ್ಲ. ಫಿಟ್ ಆಗಿಲ್ಲದ ಕಾರಣ ಮತ್ತು ನಿಧಾನಗತಿಯ ಫೀಲ್ಡಿಂಗ್ಗಾಗಿ ಧೋನಿ ವೀರೇಂದ್ರ ಸೆಹ್ವಾಗ್ ಅವರನ್ನು ತಂಡದಿಂದ ಕೈಬಿಟ್ಟರು. ಜೊತೆಗೆ ಸ್ಲೋ ಫೀಲ್ಡರ್ ಎಂದು ನೇರವಾಗಿ ಪತ್ರಿಕಾಗೋಷ್ಠಿಯಲ್ಲಿ ಧೋನಿ ಸೆಹ್ವಾಗ್ ಬಗ್ಗೆ ಹೇಳಿಕೆ ನೀಡಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ನಡುವಿನ ಭಿನ್ನಾಭಿಪ್ರಾಯದ ಸುದ್ದಿ ಹಲವು ಬಾರಿ ಸ್ಫೋಟಗೊಂಡಿತ್ತು. ಆದರೆ ಯಾರೂ ಬಹಿರಂಗವಾಗಿ ಏನನ್ನೂ ಹೇಳಲಿಲ್ಲ. ಧೋನಿಯಿಂದಾಗಿ ಹಲವು ಆಟಗಾರರು ತಂಡದಿಂದ ಹೊರ ಹೋಗಿದ್ದಾರೆ ಎಂದು ಯುವರಾಜ್ ತಂದೆ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಹೇಳಿದ್ದರು. ಯುವರಾಜ್ ವೃತ್ತಿಜೀವನದ ಅಂತ್ಯಕ್ಕೆ ಧೋನಿ ಕಾರಣ ಎಂದು ಅವರು ಆರೋಪಿಸಿದರು. ಆದರೆ ಧೋನಿ ಉತ್ತುಂಗದಲ್ಲಿದ್ದುದರಿಂದ ಯಾವುದೂ ಅಷ್ಟಾಗಿ ಪ್ರಭಾವ ಬೀರಲಿಲ್ಲ.
ಕೊಹ್ಲಿ ಕಿರಿಕ್, ಕುಂಬ್ಳೆ ರಿಸೈನ್..!
2016ರಲ್ಲಿ ಅನಿಲ್ ಕುಂಬ್ಳೆ ತಂಡದ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಂಡಾಗ ಮಹೇಂದ್ರ ಸಿಂಗ್ ಧೋನಿ ತಂಡದ ನಾಯಕರಾಗಿದ್ದರು. ಮುಂದಿನ ವರ್ಷವೇ ಧೋನಿ ಈ ಜವಾಬ್ದಾರಿಯನ್ನು ಕೊಹ್ಲಿಗೆ ನೀಡಿದರು. ಆದರೆ, ಕೊಹ್ಲಿ ಮತ್ತು ಕುಂಬ್ಳೆಗೆ ಹೊಂದಾಣಿಕೆಯಾಗಲಿಲ್ಲ. ಕುಂಬ್ಳೆ ಅವರ ಕೋಚಿಂಗ್ ಶೈಲಿಯಿಂದ ಕೊಹ್ಲಿಗೆ ಸಮಸ್ಯೆ ಉಂಟಾಗಿದ್ದು, ಈ ಕಾರಣದಿಂದ ಕುಂಬ್ಳೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳದೆ ಕೊಂಚಿಗ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
‘ವಿರಾಟ್ಗೆ ಗುನ್ನ ಇಟ್ಟ ಬಿಸಿಸಿಐ
ಕಾಲ ಎಲ್ಲರಿಗೂ ಬಂದೇ ಬರುತ್ತದೆ ಅನ್ನುವುದು ಸುಳ್ಳಲ್ಲ. ಕುಂಬ್ಳೆ ಬಗ್ಗೆ ಅಸಮಧಾನ ಹೊರ ಹಾಕಿ ವಿರಾಟ್ ಅವರ ರಾಜಿನಾಮೆಗೆ ಕಾರಣವಾಗಿದ್ರು.ಆದರೆ ಕೊಹ್ಲಿ ಟಿ20 ಕ್ಯಾಪ್ಟನ್ಸಿ ಬಿಟ್ಟ ಮೇಲೆ ಏಕದಿನ ನಾಯಕತ್ವವನ್ನೂ ಬಿಟ್ಟಿದ್ದಾರೆ. ರೋಹಿತ್ ಮತ್ತು ವಿರಾಟ್ ನಡುವಿನ ವಿವಾದ ಹೊಸತಲ್ಲ. ಆದರೂ ಇತ್ತೀಚಿನ ದಿನಗಳ ಬೆಳವಣಿಗೆಗಳು ಟೀಮ್ ಇಂಡಿಯಾಕ್ಕೆ ಒಳ್ಳೆಯದಾಗಿ ಕಾಣುತ್ತಿಲ್ಲ.