Indian cricket – ಭಾರತ ಎ ತಂಡಕ್ಕೆ ಪ್ರಿಯಾಂಕ್ ಪಂಚಾಲ್ ನಾಯಕ
ಗುಜರಾತ್ ನ ಅರಂಭಿಕ ಆಟಗಾರ ಪ್ರಿಯಾಂಕ್ ಪಾಂಚಲ್ ಅವರು ಭಾರತ ಎ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ನ್ಯೂಜಿಲೆಂಡ್ ಎ ತಂಡದ ವಿರುದ್ಧ ನಡೆಯಲಿರುವ ನಾಲ್ಕು ದಿನಗಳ ಮೂರು ಪಂದ್ಯಗಳನ್ನು ಭಾರತ ಎ ತಂಡ ಆಡಲಿದೆ. ಭಾರತ ಎ ತಂಡದ 16 ಆಟಗಾರರನ್ನು ಆಯ್ಕೆ ಸಮಿತಿ ಈಗಾಗಲೇ ಪ್ರಕಟಿಸಿದೆ.
ತಂಡದಲ್ಲಿ ರುತುರಾಜ್ ಗಾಯಕ್ವಾಡ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ ಹಾಗೂ ಉಮ್ರನ್ ಮಲ್ಲಿಕ್ ಮೊದಲಾದವರು ಆಡಲಿದ್ದಾರೆ. ಹಾಗೇ ಪಶ್ವಿಮ ಬಂಗಾಳದ ಅಭಿಮನ್ಯು ಈಶ್ವರನ್, ಮಧ್ಯ ಪ್ರದೇಶದ ರಣಜಿ ಹಿರೋ ರಜತ್ ಪಟಿದಾರ್, ಮುಂಬೈನ ಸಫ್ರರಾಜ್ ಖಾನ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.
ಹಾಗೇ ಯುವ ಆಟಗಾರರಾದ ತಿಲಕ್ ವರ್ಮಾ, ಮಧ್ಯಮ ವೇಗಿ ಮುಕೇಶ್ ಕುಮಾರ್ ಮತ್ತು ಯಶ್ ದಯಾಳ್ ಕೂಡ ಭಾರತ ಎ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಮತ್ತು ಮೂರನೇ ಪಂದ್ಯ ನಡೆಯಲಿದೆ. ಹಾಗೇ ಎರಡನೇ ಪಂದ್ಯ ಹುಬ್ಬಳ್ಳಿಯ ರಾಜ್ನಗರ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇನ್ನು ನ್ಯೂಜಿಲೆಂಡ್ ಎ ತಂಡದ ವಿರುದ್ಧ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳು ಚೆನ್ನೈ ನ ಎಮ್ ಎ ಚಿದಂಬರಮ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿಗೆ ತಂಡವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.
ಪ್ರಿಯಾಂಕ್ ಪಂಚಾಲ್ (ನಾಯಕ), ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್ ರಜತ್ ಪಟಿದಾರ್, ಸಫ್ರರಾಜ್ ಖಾನ್, ತಿಲಕ್ ವರ್ಮಾ, ಕೆ.ಎಸ್. ಭರತ್, ಉಪೇಂದ್ರ ಯಾದವ್, ಕುಲದೀಪ್ ಯಾದವ್, ಸೌರಭ್ ಕುಮಾರ್, ರಾಹುಲ್ ಚಾಹರ್, ಪ್ರಸಿದ್ಧ್ ಕೃಷ್ಣ, ಉಮ್ರಾನ್ ಮಲ್ಲಿಕ್, ಮುಕೇಶ್ ಕುಮಾರ್, ಯಶ್ ದಯಾಲ್, ಅರ್ಝಾನ್ ನಗ್ವಾಸ್ವಾಲ್.