2024ರ ಟಿ20 ವಿಶ್ವಕಪ್ಗೆ ಸಿದ್ಧತೆ ಆರಂಭಗೊಂಡಿದ್ದು ಮುಂಬರುವ ನ್ಯೂಜಿಲೆಂಡ್ ಸರಣಿಯಿಂದಲೇ ಪ್ರಯೋಗ ಶುರುವಾಗಲಿದೆ ಎಂದು ಟೀಮ್ ಇಂಡಿಯಾದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ನ.18ರಿಂದ ಆತಿಥೇಯ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ಸ್ ವಿಲಿಯಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ಟ್ರೋಫಿಯನ್ನು ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಹಾರ್ದಿಕ್, ಟಿ20 ವಿಶ್ವಕಪ್ ಸೋತ ಬಗ್ಗೆ ಬೇಸರವಿದೆ. ಆದರೆ ನಾವು ವೃತ್ತಿ ಪರ ಆಟಗಾರರು, ನಿರಾಸೆಗಳನ್ನು ಬದಿಗೊತ್ತಿ ನಡೆಯಬೇಕಿದೆ. ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ.
2024ರ ಟಿ 20 ವಿಶ್ವಕಪ್ಗೆ ಸಿದ್ಧತೆ ಆರಂಭವಾಗಿದೆ. ಆಟಗಾರರಿಗೆ ಅವಕಾಶ ಸಿಗಲಿದೆ.ಸಮಯ ಇರುವುದರಿಂದ ಕೂತು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹಾರ್ದಿಕ್ ಹೇಳಿದರು.
ಯುವ ಆಟಗಾರರಿಗೆ ಇದು ಉತ್ತಮ ವೇದಿಕೆ. ತಂಡದ ಸಂಸ್ಕೃತಿ ಬಗ್ಗೆ ತಿಳಿದಿದೆ. ಅವರ ಮೇಲೆ ನಿರೀಕ್ಷೆ ಬಗ್ಗೆಯೂ ಅವರಿಗೆ ಅರಿವಿದೆ ಎಂದು ಹೇಳಿದರು.