ಟೀಮ್ ಇಂಡಿಯಾ ಮತ್ತ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳು ಬಾಕಿ ಉಳಿದಿವೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ತವರಿನಲ್ಲಿ ಸರಣಿ ಗೆಲ್ಲಬೇಕಾದರೆ ಟೀಮ್ ಇಂಡಿಯಾ ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಿದೆ. ದಕ್ಷಿಣ ಆಫ್ರಿಕಾ ಒಂದು ಪಂದ್ಯ ಗೆದ್ದರೂ ಭಾರತದಲ್ಲಿ ಸರಣಿ ಗೆದ್ದ ಹೆಮ್ಮೆಯಿಂದ ತವರಿಗೆ ವಾಪಾಸಾಗಲಿದೆ.
ರಾಜ್ಕೋಟ್ನಲ್ಲಿ 4ನೇ ಪಂದ್ಯ:
ಸರಣಿಯ ಮಹತ್ವದ 4ನೇ ಪಂದ್ಯ ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆಯಲಿದೆ. ಇದು ಅಪ್ಪಟ ಬ್ಯಾಟಿಂಗ್ ಪಿಚ್ ಆಗಿದ್ದು ಬ್ಯಾಟ್ಸ್ಮನ್ಗಳಿಗೆ ಹಬ್ಬ ಎಂದು ವಿಶ್ಲೇಷಿಸಲಾಗುತ್ತಿದೆ. ಎರಡೂ ತಂಡಗಳು ಇಲ್ಲಿನ ಹ್ಯುಮಿಡಿಯ ಬಗ್ಗೆ ಹೆಚ್ಚು ಗಮನ ಹರಿಸಲಿದೆ. ಜೂನ್ 17 ರಂದು ಈ ಪಂದ್ಯ ನಡೆಯಲಿದೆ.
ಬೆಂಗಳೂರಿನಲ್ಲಿ ಅಂತಿಮ ಪಂದ್ಯ:
ಸರಣಿಯ ಅಂತಿಮ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ರಾಜ್ಕೋಟ್ನಲ್ಲಿ ಭಾರತ ಪಂದ್ಯ ಗೆದ್ರೆ ಬೆಂಗಳೂರು ಮ್ಯಾಚ್ ಫೈನಲ್ ರೀತಿ ಇರಲಿದೆ. ಜೂನ್ 19ರ ಭಾನುವಾರ ಈ ಪಂದ್ಯ ನಡೆಯಲಿದೆ. ಸಿಲಿಕಾನ್ ಸಿಟಿ ಜನ ಅದ್ಭುತ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ದಕ್ಷಿಣ ಆಫ್ರಿಕಾ ಕಟಕ್ ಪಂದ್ಯವನ್ನು ಸೋತಿದ್ದು ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಭಾರತ ತವರಿನಲ್ಲಿ ಅವಮಾನ ಎದುರಿಸದೇ ಇರುವ ಬಗ್ಗೆ ಪ್ಲಾನ್ ಮಾಡುತ್ತಿದೆ.