ಭಾರತ ಕ್ರಿಕೆಟ್ನಲ್ಲಿ ವ್ಯಕ್ತಿ ಪೂಜೆ ವಿರುದ್ಧ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಜಿ ಓಪನರ್ ಕೊಹ್ಲಿ ಮೊನ್ನೆ ಸೆಂಚೂರಿ ಬಾರಿಸಿದಾಗ, ಅತ್ತ ನಮ್ಮದೇ ಬೌಲರ್ ಭುವಿ 5 ವಿಕೆಟ್ ಕಿತ್ತರು.ಆತನನ್ನು ಯಾರು ಪ್ರಶಂಶಿಸಲೇ ಇಲ್ಲ. ಇದು ದುರಂತ. ಆದರೆ ಕಮೆಂಟರಿಯಲ್ಲಿ ಭುವಿಯನ್ನು ಹೊಗಳಿದೆ.ಕೊಹ್ಲಿ ಶತಕವನ್ನು ಎಲ್ಲರೂ ಹೊಗಳಿದರು.ನಾವು ಇನ್ನಾದರೂ ವ್ಯಕ್ತಿ ಪೂಜೆ ನಿಲ್ಲಿಸಬೇಕು.ಭಾರತೀಯ ಕ್ರಿಕೆಟನ್ನು ಪೂಜಿಸಿ ಕ್ರಿಕೆಟ್ ಅಥವಾ ರಾಜಕೀಯದಲ್ಲಿ ವ್ಯಕ್ತಿ ಪೂಜೆ ಸಲ್ಲದು ಎಂದಿದ್ದಾರೆ.
1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗಿನಿಂದ ವ್ಯಕ್ತಿಪೂಜೆ ಆರಂಭವಾಗಿದೆ ಎಂದು ಹೇಳಿದ್ದಾರೆ. ಕಪಿಲ್ ದೇವ್, ಧೊನಿ ಮತ್ತು ವಿರಾಟ್ ಕೊಹ್ಲಿವರೆಗೂ ವ್ಯಕ್ತಿಪೂಜೆ ನಡೆಯುತ್ತಲ್ಲೆ ಬಂದಿದೆ ಎಂದು ಗುಡುಗಿದ್ದಾರೆ.
ಭಾರತ ಕ್ರಿಕೆಟ್ನ ವ್ಯವಸ್ಥೆಯಲ್ಲಿನ ಲೋಪಗಳನ್ನು ಗುರುತಿಸಿರುವ ಅವರು ನೈಜ ವ್ಯವಸ್ಥೆಯಲ್ಲಿ ಹೇಗೆ ಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಹಿಂಬಾಲಕರನ್ನು ನಕಲಿ ಎಂದು ಕರೆದಿದ್ದಾರೆ.
ತಂಡದ ಇತರೆ ಆಟಗಾರರು ಒಳ್ಳೆಯ ಪ್ರದರ್ಶನ ನೀಡಿದರೂ ಅವರನ್ನು ಪ್ರಶಂಸಿಬೇಕೆಂದು ಕರೆ ನೀಡಿದ್ದಾರೆ.
ವ್ಯಕ್ತಿ ಪೂಜೆಯನ್ನು ಸೋಶಿಯಲ್ ಮೀಡಿಯಾದ ಹಿಂಬಾಲಕರು ಸೃಷ್ಟಿಸಿದ್ದಾರೆ. ಇದು ದೇಶದ ನಕಲಿಯಾಗಿದೆ. ಎಷ್ಟು ಜನ ಹಿಂಬಾಲಕರಿದ್ದಾರೆ ಎನ್ನುವ ಆಧಾರದ ಮೇಲೆ ಬ್ರಾಂಡ್ ಸೃಷ್ಟಿಸಲಾಗಿದೆ ಎಂದಿದ್ದಾರೆ.
ಮಾಧ್ಯಮ ಮತ್ತು ಪ್ರಸಾರಕ ವಿರುದ್ಧವೂ ಹರಿಹಾಯ್ದಿರುವ ಗಂಭೀರ್, ಒಂದು ಒಬ್ಬ ಆಟಗಾರನ ಬಗ್ಗೆ ಮಾತನಾಡುತ್ತಿದ್ದಾರೆ ಆತ ಬ್ರಾಂಡ್ ಆಗಿ ಬಿಡುತ್ತಾನೆ. 1983ರಲ್ಲಿ ಕಪಿಲ್ ದೇವ್ ವಿಶ್ವಕಪ್ ಗೆಲ್ಲಿಸಿಕೊಟ್ಟಾಗ,2007, 2011ರಲ್ಲಿ ಧೋನಿ ವಿಶ್ವಕಪ್ ಕೊಟ್ಟಾಗ. ಆಟಗಾರರು ಯಾರು ಇದನ್ನು ಸೃಷ್ಟಿಸಲಿಲ್ಲ ಎಂದು ಹೇಳಿದ್ದಾರೆ.