ಆರ್ಸಿಬಿ ಗೆಲುವಿನ ಹೀರೋ ಆಗಿರುವ ಶಹಬಾಜ್ ಅಹ್ಮದ್ ಮೇವಾತ್ ಜಿಲ್ಲೆಯ ಸಿಕ್ರಾವಾ ಗ್ರಾಮದವರು. ಅವರ ತಂದೆ ಅಹ್ಮದ್ ಜಾನ್ ಪಲ್ವಾಲ್ದ ಎಸ್ಡಿಎಂ ನಲ್ಲಿ ರೀಡರ್. ಮಧ್ಯಮ ವರ್ಗದ ಆಸೆಯಂತೆ ಶಹಬಾಜ್ ತಂದೆ ತನ್ನ ಮಗ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿ ಮನೆಯನ್ನು ನಡೆಸಲಿ ಎಂದು ಬಯಸಿದ್ದರು. ಮಕ್ಕಳ ಉಜ್ವಲ್ ಭವಿಷ್ಯಕ್ಕಾಗಿ ಅವರು ಹಳ್ಳಿಯನ್ನು ತೊರೆದು ಪಟ್ಟಣದಲ್ಲಿ ವಾಸಿಸಲು ಪ್ರಾರಂಭಿಸಿದರು. ಇದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಆಸೆ ಅವರದ್ದಾಗಿತ್ತು.
12 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, 2011 ರಲ್ಲಿ, ತಂದೆ ಅಹ್ಮದ್ ಅವರು ಇಂಜಿನಿಯರ್ ಆಗಲು ಫರಿದಾಬಾದ್ನ ಮಾನವ್ ರಚನಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಗೆ ಶಹಬಾಜ್ ರನ್ನು ಸೇರಿಸಿದರು.
ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು 3 ವರ್ಷಗಳಲ್ಲಿ ಅಂದರೆ 2015 ರಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಕ್ರಿಕೆಟ್ನಿಂದಾಗಿ ಅದು 2022 ರಲ್ಲಿ ಪೂರ್ಣಗೊಂಡಿತು ಎಂದು ಅಹ್ಮದ್ ಜಾನ್ ಹೇಳಿದ್ದಾರೆ. 2022ರಲ್ಲಿ ಒಂದು ಪೇಪರ್ ಬರೆದು ಪಾಸ್ ಆಗಿ, ಅಮ್ಮನ ಅಪ್ಪಣೆಯ ಮೇರೆಗೆ ಪದವಿ ಪಡೆದರು.
ಪದವಿಯ ಚಿಂತೆ ಬೇಡ ಅಮ್ಮ, ವಿಶ್ವವಿದ್ಯಾಲಯದವರೇ ಕರೆದು ನೀಡುತ್ತಾರೆ ಎಂದು ಶಹಬಾಜ್ ಯಾವಾಗಲೂ ತನ್ನ ತಾಯಿಗೆ ಹೇಳುತ್ತಿದ್ದರು. ಇದು ನಿಜವೂ ಆಯಿತು.
ಈ ವರ್ಷದ ಜನವರಿಯಲ್ಲಿ ವಿಶ್ವವಿದ್ಯಾನಿಲಯದಿಂದ ಘಟಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಮ್ಮನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಆದರೆ ಕ್ರಿಕೆಟ್ನಿಂದ ಶಹಬ್ಬಾಸ್ ಸಮರಾಂಭಕ್ಕೆ ಹಾಜರಾಗಲಿಲ್ಲ. ಆದ್ದರಿಂದ ನಾವು ಅವರ ಪದವಿಯನ್ನು ಪಡೆಯಲು ಹೋದೆವು. ನಮಗೆ ಆ ಗೌರವ ಸಿಕ್ಕಿತು” ಎಂದು ತಂದೆ ತಿಳಿಸಿದ್ದಾರೆ.
ಫರಿದಾಬಾದ್ನಲ್ಲಿ ಇಂಜಿನಿಯರಿಂಗ್ ಓದಲು ಮಗನಿಗೆ ಆಸಕ್ತಿ ಇಲ್ಲ ಎಂಬುದು ತನಗೆ ಗೊತ್ತಿರಲಿಲ್ಲ ಎನ್ನುತ್ತಾರೆ ಅಹ್ಮದ್ ಜಾನ್. ಶಹಬ್ಬಾಸ್ ಕ್ರಿಕೆಟ್ ಆಡಲು ತರಗತಿಗೆ ಬಂಕ್ ಮಾಡುತ್ತಿದ್ದ. ತನ್ನ ಮಗ ತರಗತಿಗೆ ಹೋಗುತ್ತಿಲ್ಲ ಎಂದು ವಿಶ್ವವಿದ್ಯಾನಿಲಯದಿಂದ ಮೆಸೇಜ್ ಬಂದಾಗಲೇ ತಿಳಿಯಿತು” ಎಂದು ಹೇಳಿದ್ದಾರೆ.
ಅಧ್ಯಯನ ಅಥವಾ ಕ್ರಿಕೆಟ್ ನಡುವೆ ಆಯ್ಕೆ ಮಾಡಲು ಶಹಬಾಜ್ಗೆ ಕುಟುಂಬಸ್ಥರು ಹೇಳಿದರು. ನಂತರ ಶಹಬ್ಬಾಸ್ ಕ್ರಿಕೆಟ್ ಆಯ್ಕೆ ಮಾಡಿಕೊಂಡರು ಮತ್ತು ಅದರತ್ತ ಗಮನ ಹರಿಸಲು ನಿರ್ಧರಿಸಿದರು. ಇದರ ನಂತರ ಅವರು ಗುರ್ಗಾಂವ್ನ ತೆಹ್ರಿಯಲ್ಲಿರುವ ಕ್ರಿಕೆಟ್ ಅಕಾಡೆಮಿಗೆ ಸೇರಿದರು.
2020 ರ ಐಪಿಎಲ್ ಹರಾಜಿನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಲಕ್ಷಕ್ಕೆ ಶಹಬಾಜ್ ಅವರನ್ನು ಖರೀದಿಸಿತು. ಯುಎಇಯಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿದ್ದರೂ. 2021 ರಲ್ಲಿ ಅವರು RCB ತಂಡದ ಭಾಗವಾಗಿದ್ದರು.