ಸೋಲಿನಿಂದ ಪಾಠ ಕಲಿತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಪಂಜಾಬ್ ತಂಡಗಳು ಇಂದು ಮುಖಾಮುಖಿಯಾಗಲಿವೆ.
ಇಲ್ಲಿನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿಗಾಗಿ ದೊಡ್ಡ ಹೋರಾಟವನ್ನೆ ಮಾಡಲಿವೆ. ಚೆನ್ನೈ ರಾಜಸ್ಥಾನ ವಿರುದ್ಧ 32 ರನ್ಗಳಿಂದ ಸೋತರೆ ಪಂಜಾಬ್ ತಂಡ ಲಖನೌ ವಿರುದ್ಧ 56 ರನ್ಗಳಿಂದ ಸೋತಿತ್ತು.
ಚೆನ್ನೈ 8 ಪಂದ್ಯಗಳಿಂದ 5ರಲ್ಲಿ ಗೆದ್ದು 3ರಲ್ಲಿ ಸೋತು 10 ಅಂಕಗಳೊಂದಿಗೆ ನಾಲ್ಕನೆ ಸ್ಥಾನದಲ್ಲಿದೆ.
ಪಂಜಾಬ್ ತಂಡ 8 ಪಂದ್ಯಗಳಿಂದ 4ರಲ್ಲಿ ಗೆದ್ದು 4ರಲ್ಲಿ ಸೋತು 8 ಅಂಕಗಳೊಂದಿಗೆ ಆರನೆ ಸ್ಥಾನದಲ್ಲಿದೆ.
ಚೆನ್ನೈ ಸೋಲುವ ಮುನ್ನ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು. ಪಂಜಾಬ್ ಆರಂಭದಲ್ಲಿ ಸತತ ಎರಡು ಗೆಲುವುಗಳನ್ನು ದಾಖಲಿಸಿತ್ತು. ಈ ಋತುವಿನಲ್ಲಿ ಇದು ಮೊದಲ ಮುಖಾಮುಖಿಯಾಗಿದೆ.
ಚೆನ್ನೈ ತವರಿನಲ್ಲಿ ಆಡುತ್ತಿರುವುದರಿಂದ ಪಂಜಾಬ್ ಎದುರು ಗೆಲ್ಲುವ ನೆಚ್ಚಿನ ತಂಡವಾಗಿದೆ. ಚೆನ್ನೈ ತಂಡದ ಸ್ಪಿನ್ನರ್ಗಳು ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ.
ಮೊನ್ನೆ ರಾಜಸ್ಥಾನ ವಿರುದ್ಧ ಚೆನ್ನೈ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ಡೆವೊನ್ ಕಾನ್ವೆ ಹೊರತುಪಡಿಸಿ ಋತುರಾಜ್ ಗಾಯಕ್ವಾಡ್ ಮತ್ತು ಅಜಿಂಕ್ಯ ರಹಾನೆ ಹಾಗೂ ಶಿವಂ ದುಬೆ ಉತ್ತಮ ರನ್ ಕಲೆ ಹಾಕಿದ್ದಾರೆ. ರವೀಂದ್ರ ಜಡೇಜಾ ಬ್ಯಾಟಿಂಗ್ನಲ್ಲಿ ಎಡವಿದ್ದಾರೆ. ವೇಗಿ ತುಷಾರ್ ದೇಶಪಾಂಡೆ ಟೂರ್ನಿಯಲ್ಲಿ 14 ವಿಕೆಟ್ ಪಡೆದಿದ್ದಾರೆ. ದೀಪಕ್ ಚಾಹರ್ ಅನುಪಸ್ಥಿತಿ ಕಾಡುತ್ತಿದೆ. ಆಕಾಶ್ ಸಿಂಗ್ ಮತ್ತು ಮಥೀಶಾ ಪಾಥಿರಾನಾ ಸುಧಾಸಿದ್ದಾರೆ.
ಪಂಜಾಬ್ ಸ್ಥಿರ ಪ್ರದರ್ಶನ ನೀಡುವಲಲಿ ಎಡವಿದೆ. ಪಂಜಾಬ್ ಬ್ಯಾಟರ್ಗಳು ಚೆನ್ನೈ ಸ್ಪಿನ್ನರ್ಗಳೆದುರು ಕಠಿಣ ಸವಾಲು ಎದುರಿಸಲಿದ್ದಾರೆ. ಬ್ಯಾಟಿಂಗ್ನಲ್ಲಿ ಶಿಖರ್ ಧವನ್, ಪ್ರಭುಸಿಮ್ರಾನ್ ಸಿಂಗ್ ಮತ್ತು ಅಥರ್ವ ತೈಡೆ ದೊಡ್ಡ ಮೊತ್ತ ಕಲೆ ಹಾಕಬೇಕು, ಲಿವಿಂಗ್ಸ್ಟೋನ್ ಕೂಡ ಹೆಚ್ಚು ಹೊತ್ತು ಆಡಬೇಕಿದೆ.
ಸ್ಯಾಮ್ ಕರ್ರನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚುತ್ತಿರುವುದು ತಂಡಕ್ಕೆ ಲಾಭ ತಂದಿದೆ. ವೇಗಿಗಳಾದ ಅರ್ಷದೀಪ್ ಹಾಗೂ ಕಗಿಸೊ ರಬಾಡ ಲಖನೌ ವಿರುದ್ಧ ದುಬಾರಿಯಾಗಿದ್ದರು.
ಲೆಗ್ ಸ್ಪನ್ನರ್ ರಾಹುಲ್ ಚಾಹರ್ ಮಧ್ಯಮ ಓವರ್ಗಳಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದು ಚೆನ್ನೈ ಪಿಚ್ ಸಹಕರಿಸಲಿದೆ.