ಭಾನುವಾರ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಅಭಿಮಾನಿಗಳಿಗೆ ಮ್ಯಾಚ್ ನಡೆಯದೇ ಇರುವುದು ನಿಜಕ್ಕೂ ಬೇಸರದ ಸಂಗತಿ. ಈ ನಿರಾಸೆಯ ಕಾರ್ಮೊಡದ ನಡುವೆ ಕರ್ನಾಟಕದ ರಾಜ್ಯ ಕ್ರಿಕೆಟ್ ಸಂಸ್ಥೆ ಬೆಳ್ಳಿ ರೆಖೆ ಮೂಡಿಸಿದೆ.
ಇದೆನಪ್ಪಾ ಕೆಎಸ್ ಸಿಎ ಅಂಗಳದಲ್ಲಿ ಇದೇ ಪಂದ್ಯ ಮತ್ತೊಮ್ಮೆ ಆಡಲಾಗುತ್ತದೆ ಎಂದು ನೀವು ಲೆಕ್ಕಾಚಾರ ಹಾಕಿಕೊಂಡಿದ್ದರೆ ಅದು ತಪ್ಪು. ಆದರೆ ಕೆಎಸ್ ಸಿಎ ಅಭಿಮಾನಿಗಳಿಗೆ ಟಿಕೆಟ್ ಹಣದ ಶೇಕಡಾ 50 ರಷ್ಟನ್ನು ನೀಡುವುದಾಗಿ ತಿಳಿಸಿದೆ.
ಇನ್ನು ಒಂದೇ ಒಂದು ಎಸೆತ ಆಗದೇ ಇದ್ದಿದ್ದರೆ ಟಿಕೆಟ್ ಹಣ ಸಂಪೂರ್ಣ ನೀಡಲಾಗುತ್ತಿತ್ತು. ಒಂದು ವೇಳೆ ಒಂದೇ ಒಂದು ಎಸೆತ ಎಸೆದರೂ ಹಣ ನೀಡಲಾಗುವುದಿಲ್ಲ ಎಂದು ಮೊದಲೇ ಸೂಚಿಸಲಾಗಿರುತ್ತದೆ. ಅದರಂತೆ ಭಾನುವಾರ 3.3 ಓವರ್ ಗಳ ಪಂದ್ಯ ನಡೆದಿದೆ.
ನಿಯಮಗಳ ಅನ್ವಯ ಹಣ ಹಿಂತಿರಿಗಿಸುವ ಅಗತ್ಯವಿಲ್ಲ. ಆದರೆ ರಾಜ್ಯ ಕ್ರಿಕೆಟ್ ಸಂಸ್ಥೆ ಹಣ ಕೊಟ್ಟು ಟಿಕೆಟ್ ಪಡೆದ ಅಭಿಮಾನಿಗಳಿಗೆ ಶೇಕಡಾ 50 ರಷ್ಟು ಹಣವನ್ನು ನೀಡುವುದಾಗಿ ತಿಳಿಸಿದೆ.