ಕ್ರಿಕೆಟ್ ಟ್ರೆಂಡ್ ಬದಲಾಗಿದೆ. ವೇಗದ ಆಟಕ್ಕೆ ಮಾತ್ರ ಇಲ್ಲಿ ಬೆಲೆ. ಅದೇ ರೀತಿ ಕಾಮೆಂಟೇಟರ್ಗಳ ಟ್ರೆಂಡ್ ಕೂಡ ಬದಲಾಗಿದೆ. ಈ ಹಿಂದೆ ಮಾಜಿ ಆಟಗಾರರು, ನಿವೃತ್ತಿ ಹೊಂದಿದವರು,ಭಾಷೆ ಮೇಲೆ ಸಖತ್ ಹಿಡಿತಿದ್ದವರು ಮಾತ್ರ ಕಾಮೆಂಟೇಟರ್ಗಳಾಗುತ್ತಿದ್ದರು. ಒಮ್ಮೆ ಕಾಮೆಂಟೇಟರ್ ಆದರೆ ಮತ್ತೆ ಮೈದಾನಕ್ಕಿಳಿಯುವುದು ಡೌಟ್ ಅಂತನೇ ಅರ್ಥ. ಆದ್ರೆ ಈಗ ಕಾಲ ಬದಲಾಗಿದೆ. ಕಾಮೆಂಟೇಟರ್ಗಳು ಮ್ಯಾಚ್ ವಿನ್ನರ್ಗಳಾಗಿದ್ದಾರೆ. ಉಳಿದ ಆಟಗಾರರ ಬಗ್ಗೆ ಕಾಮೆಂಟ್ ಮಾಡುವ ಮೊದಲು ತನ್ನ ಶಕ್ತಿ ಪ್ರರ್ದರ್ಶನ ತೋರಿದ್ದಾರೆ.
ಕೆಲ ತಿಂಗಳುಗಳ ಹಿಂದೆ ದಿನೇಶ್ ಕಾರ್ತಿಕ್ ಕ್ರೀಡಾ ವಾಹಿನಿಯಲ್ಲಿ ಕಾಮೆಂಟೇಟರ್ ಆಗಿದ್ದರು. ಮ್ಯಾಚ್ ಅನಾಲಿಸ್ ಮತ್ತು ಲೈವ್ ಕಾಮೆಂಟರಿಯಲ್ಲಿ ಡಿಕೆ ಬ್ಯೂಸಿಯಾಗಿದ್ದರು. ಆದರೆ ಐಪಿಎಲ್ ವೇಳೆ ಕಣಕ್ಕಿಳಿದರು. ಮ್ಯಾಚ್ ವಿನ್ನರ್ ಆಗಿ ಬದಲಾದರು. ಟೀಮ್ ಇಂಡಿಯಾಕ್ಕೆ ರಿ ಎಂಟ್ರಿ ಕೊಟ್ರು. ಅಲ್ಲೂ ಮ್ಯಾಚ್ ಫಿನಿಷರ್ ಆಗಿ ಮಿಂಚಿದ್ದಾರೆ.
ದಿನೇಶ್ ಜೊತೆಗೆ ರಾಬಿನ್ ಉತ್ತಪ್ಪ ಕೂಡ ಕಾಮೆಂಟೇಟರ್ ಆಗಿ ಕೆಲಸ ಮಾಡಿದ್ದರು. ರಾಬಿನ್ ಕೂಡ ಈ ಐಪಿಎಲ್ನಲ್ಲಿ ಮಿಂಚಿದ್ದರು. ಸುರೇಶ್ ರೈನಾ ಹೊಸತಾಗಿ ಈ ಲಿಸ್ಟ್ ಸೇರಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರೂ ಮತ್ತೆ ಬ್ಯಾಟ್ ಮೂಲಕ ಸದ್ದು ಮಾಡಿದರೆ ಅಚ್ಚರಿ ಇಲ್ಲ. ಯಾಕಂದ್ರೆ ಇದು ಕಾಮೇಂಟೇಟರ್ಗಳ ಕಾಲ.