ಐಪಿಎಲ್ ಆರಂಭವಾಗಿದೆ. ಎಲ್ಲ ತಂಡಗಳು ಮೊದಲ ಪಂದ್ಯವನ್ನು ಆಡಿವೆ. ಆಟಗಾರರು ಲಯ ಕಂಡು ಕೊಳ್ಳಲು ತಯಾರಿ ನಡೆಸಿದ್ದಾರೆ. ಇನ್ನು ಗಾಯದ ಸಮಸ್ಯೆ ಸಹ ತಂಡಗಳಿಗೆ ಬಹುವಾಗಿ ಕಾಡಿದೆ. ಇನ್ನು ಹಲವು ಆಟಗಾರರು ಲೀಗ್ ಆರಂಭಕ್ಕೂ ಮುನ್ನವೇ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ವಿನಾಕಾರಣ ಐಪಿಎಲ್ ತೊರೆಯುವ ಆಟಗಾರರಿಗೆ ಲಗಾಮು ಹಾಕಲು ಬಿಸಿಸಿಐ ಸಿದ್ಧತೆ ನಡೆಸಿದೆ.
ಐಪಿಎಲ್ನಲ್ಲಿ ವಿನಾಕಾರಣ ಹೊರ ನಡೆದ ಆಟಗಾರರ ವಿರುದ್ಧ ನಿಷೇಧ ಹೇರಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಹಲವು ಆಟಗಾರರು ಬಯೋಬಬಲ್ ಕಾರಣ ನೀಡಿ ಟೂರ್ನಿಯಿಂದ ಹೊರ ನಡೆಯುತ್ತಿದ್ದಂತೆ, ತಂಡಗಳು ಈ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದವು.
ಸೂಕ್ತ ಕಾರಣ ತಿಳಿಸದೆ ಐಪಿಎಲ್ ನಿಂದ ಹೊರ ನಡೆದ ಆಟಗಾರರ ಮೇಲೆ ಬಿಸಿಸಿಐ ಮುನಿಸಿಕೊಂಡಿದೆ. ಹರಾಜಿನಲ್ಲಿ ಆಟಗಾರರು ತಾವು ಅಂದುಕೊಂಡಷ್ಟು ಹಣವನ್ನು ಪಡೆಯದೇ ಇದ್ದಿದ್ದರಿಂದ ಟೂರ್ನಿಯಿಂದ ಹೊರ ನಡೆಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರವೃತ್ತಿಯನ್ನು ತಡೆಯಲು ಬಿಸಿಸಿಐ ಹೊಸ ನೀತಿ ತರಲು ಮುಂದಾಗುತ್ತಿದೆ. ಸೂಕ್ತ ಕಾರಣವಿಲ್ಲದೆ ಆಟಗಾರರು ಐಪಿಎಲ್ನಿಂದ ಹೊರಗುಳಿಯದಂತೆ ತಡೆಯುವಂಥ ನೀತಿಯನ್ನು ತರಲು ಬಿಸಿಸಿಐ ಚಿಂತನೆ ನಡೆಸಿದೆ. ಇತ್ತೀಚೆಗೆ ನಡೆದ ಆಡಳಿತ ಮಂಡಳಿ (ಜಿಸಿ) ಸಭೆಯಲ್ಲಿ ಈ ವಿಷಯ ಚರ್ಚೆಯಾಗಿದೆ.
ಸಾಮಾನ್ಯವಾಗಿ ಗಾಯಗೊಂಡ ಆಟಗಾರರು ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಲು ಐಪಿಎಲ್ನಿಂದ ಹಿಂದೆ ಸರಿಯಲು ನಿರ್ಧರಿಸುತ್ತಾರೆ, ಆದರೆ ಇತ್ತೀಚೆಗೆ ಆಟಗಾರರು ಇತರ ಕಾರಣಗಳಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ವಿನಾಕಾರಣ ಐಪಿಎಲ್ ತೊರೆಯುವ ಆಟಗಾರರನ್ನು ನಿಷೇಧಿಸಲು ಬಿಸಿಸಿಐ ಹೊಸ ನಿಯಮದ ಬಗ್ಗೆ ಪ್ಲಾನ್ ಮಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಹರಾಜಿನಲ್ಲಿ ಹೆಚ್ಚಿನ ಬೆಲೆ ಪಡೆದು ಸ್ಪರ್ಧೆಯಿಂದ ಹಿಂದೆ ಸರಿಯುವ ವಿದೇಶಿ ಆಟಗಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಹೊಸ ನೀತಿ ತರಲು ಸಿದ್ಧವಾಗಿದೆ.
ಐಪಿಎಲ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಆಟಗಾರರು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರವೃತ್ತಿಯನ್ನು ತಡೆಯಲು ಮಾರ್ಗಗಳನ್ನು ಚರ್ಚಿಸಿದ್ದಾರೆ. ಸಣ್ಣಪುಟ್ಟ ಕಾರಣಗಳಿಂದ ಹೊರಗುಳಿದ ಆಟಗಾರರನ್ನು ವೀಕ್ಷಣಾ ಪಟ್ಟಿಗೆ ಸೇರಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.