ಬೆಂಗಳೂರು: ಕರ್ನಾಟಕ ಫುಟ್ಬಾಲ್ ತಂಡ 2-0 ಗೋಲುಗಳಿಂದ ತೆಲಂಗಾಣ ವಿರುದ್ಧ ಸಂತೋಷ ಟ್ರೋಫಿ ಫುಟ್ಬಾಲ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸಿ, ಮುಂದಿನ ಸುತ್ತಿಗೆ ಪ್ರವೇಶ ಪಡೆದಿದೆ.
ಕರ್ನಾಟಕ ಆಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
ಕರ್ನಾಟಕ ತಂಡದ ಪರ ಸೋಲೈಮಲೈ ಎನ್ 10ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡು ಗೋಲು ದಾಖಲಿಸಿದರು. ಪರಿಣಾಮ ಆತಿಥೇಯ ತಂಡದ ಮುಖದಲ್ಲಿ ಮಂದಹಾಸ ಮೂಡಿಸಿದರು. ಅಲ್ಲದೆ ಈ ಅವಧಿಯಲ್ಲಿ ಆತಿಥೇಯ ತಂಡ ಮುನ್ನಡೆ ಸಾಧಿಸಿದರು.
ಎರಡನೇ ಅವಧಿಯಲ್ಲಿ ಬಾವು ನಿಶಾದ್ 74ನೇ ನಿಮಿಷದಲ್ಲಿ ಗೋಲು ಸಿಡಿಸಿ ಅಂತರವನ್ನು ಹಿಗ್ಗಿಸಿದರು. ಈ ಅವಧಿಯಲ್ಲಿ ತೆಲಂಗಾಣ ತಂಡ ಗೋಲು ಸಿಡಿಸಿ ಆತಿಥೇಯ ತಂಡಕ್ಕೆ ಶಾಕ್ ನೀಡಬೇಕೆಂಬ ಆಸೆ ಫಲಿಸಲಿಲ್ಲ. ಪರಿಣಾಮ ಕರ್ನಾಟಕ ತಂಡ ಮುನ್ನಡೆ ಸಾಧಿಸಿದಿತು. ಅಲ್ಲದೆ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.