ಟಿ-20, ಏಕದಿನ ಕ್ರಿಕೆಟ್ ಗೆ ವಿರಾಟ್ ವಿದಾಯ ? Virat saaksha tv
ಟೀಂ ಇಂಡಿಯಾ ಮೆಷಿನ್ ಗನ್ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಏಕದಿನ ಮತ್ತು ಟಿ20 ಗೆ ಗುಡ್ ಬೈ ಹೇಳಲಿದ್ದಾರಾ ಅಂದ್ರೆ ಹೌದು..! ಅನ್ನೋ ಉತ್ತರಗಳೇ ಹೆಚ್ಚಾಗಿ ಸಿಗುತ್ತಿವೆ. ಮುಂದಿನ ದಿನಗಳಲ್ಲಿ ಕೊಹ್ಲಿ ಈ ಬಗ್ಗೆ ಮಹತ್ವದ ಹೇಳಿಕೆ ನೀಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ತಮಗೆ ಮತ್ತೊಂದು ಚಾನ್ಸ್ ನೀಡದೇ ರೋಹಿತ್ ಗೆ ನಾಯಕತ್ವ ನೀಡಿರೋದು ವಿರಾಟ್ ಗೆ ಕೊಂಚವೂ ಇಷ್ಟವಿಲ್ಲ ಎನ್ನುವ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ. ಅದರಲ್ಲೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ.. ಟೀಂ ಇಂಡಿಯಾಗೆ ಇಬ್ಬರ ನಾಯಕರು ಬೇಕಿಲ್ಲ ಎಂಬ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬಿಸಿಸಿಐನ ಈ ನಿರ್ಧಾರ ವಿರಾಟ್ ಕೊಹ್ಲಿಯನ್ನು ಕೆರಳಿಸಿರಬಹುದು. ಹೀಗಾಗಿಯೇ ಮೊದಲೇ ಮಾಹಿತಿ ನೀಡಿದ್ದರೂ.. ವಿರಾಟ್ ಯಾವುದೇ ಹೇಳಿಕೆ ನೀಡಿರಲಿಲ್ಲ. ತನ್ನಿಂದ ಬಿಸಿಸಿಐ ನಾಯಕತ್ವವನ್ನು ಕಿತ್ತುಕೊಂಡಿದೆ ಎಂಬುದನ್ನ ಎಲ್ಲರಿಗೂ ತಿಳಿಯಲೆಂದೇ ವಿರಾಟ್ ಮೌನವಾಗಿದ್ದರು ಎನ್ನಲಾಗುತ್ತಿದೆ.
ಅಲ್ಲದೇ ಅಗತ್ಯಬಿದ್ದರೆ ಸೀಮಿತ ಓವರ್ ಗಳ ಮಾದರಿಗೆ ವಿದಾಯ ಹೇಳಿ ಟೆಸ್ಟ್ ಕ್ರಿಕೆಟ್ ನಲ್ಲಿ ಮಾತ್ರ ಮುಂದುವರಿಯುವ ಚಿಂತನೆಯೂ ಅವರಿಗಿದೆಯಂತೆ. ಏಕೆಂದರೆ ನಾಯಕತ್ವ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಸತತ ಎರಡ್ಮೂರು ಪಂದ್ಯಗಳಲ್ಲಿ ವಿಫಲರಾದರೆ ತಂಡದಲ್ಲಿ ಸ್ಥಾನ ಪಡೆಯುವುದೇ ಅನುಮಾನವೇ. ರೋಹಿತ್ ನಾಯಕತ್ವದಲ್ಲಿ ಕೊಹ್ಲಿಗೆ ಬೆಂಬಲ ಸಿಗುತ್ತದೆಯೇ ಎಂದು ಹೇಳುವುದು ಕಷ್ಟ. ಸತತ ವೈಫಲ್ಯ ಅನುಭವಿಸಿ ತಂಡದಲ್ಲಿ ಸ್ಥಾನ ಕಳೆದುಕೊಂಡರೆ ವಿರಾಟ್ ಸೀಮಿತ ಓವರ್ ಗಳ ಕ್ರಿಕೆಟ್ ಗೆ ವಿದಾಯ ಹೇಳುವುದು ಖಚಿತ ಎನ್ನುತ್ತಾರೆ ಕ್ರಿಕೆಟ್ ವಿಶ್ಲೇಷಕರು.
ವಾಸ್ತವವಾಗಿ, ವಿರಾಟ್ ಕೊಹ್ಲಿ 2023 ರ ODI ವಿಶ್ವಕಪ್ ನತ್ತ ಹೆಚ್ಚು ಗಮನ ಹರಿಸಲು T20 ನಾಯಕತ್ವವನ್ನು ತೊರೆದರು. ಒತ್ತಡದ ವೇಳಾಪಟ್ಟಿಯಿಂದಾಗಿ ಅವರ ಮೇಲಿನ ಒತ್ತಡವನ್ನು ತಗ್ಗಿಸಿಕೊಳ್ಳಲು ವಿರಾಟ್ T20 ನಾಯಕತ್ವದಿಂದ ಕೆಳಗಿಳಿದರು. ಜೊತೆಗೆ ಆರ್ಸಿಬಿ ನಾಯಕತ್ವಕ್ಕೂ ಗುಡ್ ಬೈ ಹೇಳಿದರು.
2023ರ ODI ವಿಶ್ವಕಪ್ ಗೆದ್ದು, ನಾಯಕತ್ವಕ್ಕೆ ವಿದಾಯ ಹೇಳಲು ವಿರಾಟ್ ಬಯಸಿದ್ದರು. ಆದರೆ ಬಿಸಿಸಿಐಗೆ ಕೊಹ್ಲಿ ನಾಯಕತ್ವದಲ್ಲಿ ನಂಬಿಕೆ ಇಲ್ಲದೇ ರೋಹಿತ್ ಶರ್ಮಾಗೆ ಏಕದಿನ ಕ್ರಿಕೆಟ್ ತಂಡದ ಸಾರಥ್ಯ ವಹಸಿದ್ದಾರೆ.