ವೇಗಿ ವಾಸೂಕಿ ವೈಭವ್ ಮಾರಕ ದಾಳಿಯ ನೆರವಿನಿಂದ ಕರ್ನಾಟಕ ತಂಡ ಡೆಲ್ಲಿ ವಿರುದ್ಧ ವಿಜಯ್ ಹಜಾರೆ ಟೂರ್ನಿಯಲ್ಲಿ 4 ವಿಕೆಟ್ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಮಯಾಂಕ್ ಪಡೆ ಸತತ ನಾಲ್ಕನೆ ಗೆಲುವು ದಾಖಲಿಸಿದ ಸಾಧನೆ ಮಾಡಿದೆ.
ಗುರುವಾರ ಕೋಲ್ಕತ್ತಾದ ಜಾಧವ್ಪುರ ಕ್ಯಾಂಪಸ್ ಮೈದಾನದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 45.4 ಓವರ್ಗಳಲ್ಲಿ 159 ರನ್ಗಳಿಗೆ ಸರ್ವಪತನ ಕಂಡಿತು.ಕರ್ನಾಟಕ ತಂಡ 29.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಕಲೆ ಹಾಕಿತು.
ಕಳಪೆ ಬ್ಯಾಟಿಂಗ್ ಮಾಡಿದ ಡೆಲ್ಲಿ ವೇಗಿ ವಾಸೂಕಿ ಕೌಶಿಕ್ ದಾಳಿಗೆ ತತ್ತರಿಸಿತು.ಡೆಲ್ಲಿ ಪರ ಲಲಿತ್ ಯಾದವ್ 59, ನಿತೀಶ್ ರಾಣಾ 30 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು.
ಕರ್ನಾಟಕ ಪರ ವಾಸೂಕಿ ಕೌಶಿಕ್ 23ಕ್ಕೆ 3, ಶ್ರೇಯಸ್ ಗೋಪಾಲ್ 25ಕ್ಕೆ 3, ವಿದ್ವಿತ್ ಕಾವೇರಪ್ಪ, ಕೆ.ಗೌತಮ್ ಹಾಗೂ ಮನೋಜ್ ಭಂಡಾಜೆ ತಲಾ 1 ವಿಕೆಟ್ ಪಡೆದರು.
160 ರನ್ ಗುರಿ ಬೆನ್ನತ್ತಿದ ಕರ್ನಾಟಕ ಪರ ಆರಂಭಿಕ ಬ್ಯಾಟರ್ ಆರ್.ಸಮರ್ಥ್ 59 (73 ಎಸೆತ, 6 ಬೌಂಡರಿ) , ಶರತ್ 12, ನಿಕಿನ್ ಜೋಸ್ 0, ಮನೀಶ್ ಪಾಂಡೆ 48, ಶ್ರೇಯಸ್ ಗೋಪಾಲ್ 26,ಅಭಿನವ್ ಮನೋಹರ್ 7 ರನ್ ಗಳಿಸಿದರು.
ಡೆಲ್ಲಿ ಪರ ಮಯಾಂಕ್ ಯಾದವ್ 47ಕ್ಕೆ 4, ನವದೀಪ್ ಸೈನಿ 31ಕ್ಕೆ 2 ವಿಕೆಟ್ ಪಡದರು.