ಏಷ್ಯಾಕಪ್ನಲ್ಲಿ (Asia Cup) ಭಾರತದ (India) ಆಟ ಮುಗಿದಿದೆ. ಇನ್ನೇನಿದ್ದರೂ ಭಾರತದ ಪ್ರದರ್ಶನದ ಬಗ್ಗೆ ಪೋಸ್ಟ್ ಮಾರ್ಟಂ ನಡೆಯಬೇಕಿದೆ. ಮುಂದಿನ ಟೂರ್ನಿಯಲ್ಲಿ ಹೇಗಾಡಬೇಕು? ಟೀಮ್ ಹೇಗಿರಬೇಕು ಅನ್ನುವುದೇ ಚರ್ಚೆಯಾಗುತ್ತಿದೆ. ಆದರೆ ದುಬೈನಲ್ಲಿ (Dubai) ಟೀಮ್ ಇಂಡಿಯಾ ಯಾಕೆ ಗೆದ್ದಿಲ್ಲ ಅನ್ನುವುದು ಪ್ರತಿದಿನ ಚರ್ಚೆಯಾಗಲಿದೆ. ಬಲಿಷ್ಠ ಮತ್ತು ಹಾಟ್ಫೆವರೀಟ್ ತಂಡ ಸೋತ ಬಗ್ಗೆ ಡಿಸ್ಕಷನ್ಗಳು ನಡೆಯಲಿದೆ.
ಭಾರತಕ್ಕೆ ಕಾಡುತ್ತಿದೆ ಶಾಪ!
ಟೀಮ್ ಇಂಡಿಯಾಕ್ಕೆ ದುಬೈ ಮೈದಾನದಲ್ಲಿ ಶಾಪ (Dubai Problem) ಕಾಡುತ್ತಿದೆ. 2021ರ ಟಿ20 ವಿಶ್ವಕಪ್ ವೇಳೆಯೂ ಇದೇ ಆಗಿತ್ತು. ಕಪ್ ಗೆಲ್ಲುವ ಹಾಟ್ ಫೆವರೀಟ್ ಆಗಿದ್ದ ಟೀಮ್ ಇಂಡಿಯಾ (Team India) ಮೊತ್ತ ಮೊದಲ ಬಾರಿಗೆ ಎಡವಿ ಬಿದ್ದಿತ್ತು. ಪಾಕಿಸ್ತಾನ (Pakistan) ವಿರುದ್ಧದ ಪಂದ್ಯದಲ್ಲಿ ಟಾಸ್ ಸೋಲು (Toss Lost) ಪಂದ್ಯದ ಸೋಲಿಗೆ ಕಾರಣವಾಗಿತ್ತು.
2ನೇ ಪಂದ್ಯದಲ್ಲೂ ನ್ಯೂಜಿಲೆಂಡ್ (Newzealand) ಮೇಲೆ ಭಾರತ ಟಾಸ್ ಗೆಲ್ಲಲಿಲ್ಲ. ಪಂದ್ಯ ಸೋಲುವ ಜೊತೆಗೆ ಟೂರ್ನಿಯಿಂದಲೇ ಭಾರತ ಹೊರಬಿತ್ತು. ಎರಡೂ ಪಂದ್ಯಗಳ ಸೋಲಿಗೆ ಟಾಸ್ ಸೋಲು ದೊಡ್ಡ ಕಾರಣವಾಗಿತ್ತು.
ಏಷ್ಯಾಕಪ್ನಲ್ಲಿ ಅದೇ ನಡೆದಿದೆ. ಮೊದಲ ಸೂಪರ್ 4 ಹೋರಾಟದಲ್ಲಿ (Super 4) ಭಾರತ, ಶ್ರಿಲಂಕಾ (Srilanka) ಮತ್ತು ಪಾಕ್ ವಿರುದ್ಧ ಟಾಸ್ ಗೆದ್ದಿಲ್ಲ, ಪಂದ್ಯವನ್ನೂ ಗೆದಿಲ್ಲ. ದುಬೈ ಮೈದಾನದಲ್ಲಿ ಬೀಳುವ ಮಂಜು ಚೇಸಿಂಗ್ ತಂಡಕ್ಕೆ ನೆರವಾಗುತ್ತಿದ್ದು ಟಾಸ್ ನಿರ್ಣಾಯಕವಾಗಿದೆ. ಹೀಗಾಗಿ ಟಾಸ್ ಶಾಪ ಭಾರತವನ್ನು ದುಬೈನಲ್ಲಿ ಪದೇ ಪದೇ ಸೋಲುವಂತೆ ಮಾಡಿದೆ.