Syed Mushtaq Ali Trophy: ಕರ್ನಾಟಕಕ್ಕೆ ಸೋಲು
ಸ್ಟಾರ್ ಬ್ಯಾಟ್ಸ್ ಮನ್ ಗಳು ರನ್ ಬಾರಿಸದೆ ಇದ್ದಿದ್ದರಿಂದ ಕರ್ನಾಟಕ (Karnataka), ಸೈಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy) ಟಿ-20 ಟೂರ್ನಿಯ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ Kerala ವಿರುದ್ಧ ಸೋಲು ಕಂಡಿದೆ.
ಮೊದಲು ಬ್ಯಾಟ್ ಮಾಡಿದ ಕೇರಳ ತಂಡದ ಆರಂಭ ಉತ್ತಮವಾಗಿತ್ತು. ವಿಶ್ಣು ವಿನೋದ್ (34) ಹಾಗೂ ರೋಹನ್ ಕೆ (16) ತಂಡಕ್ಕೆ 45 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಉಳಿದಂತೆ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ಒಂದು ತುದಿಯಲ್ಲಿ ನೆಲಕಚ್ಚಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದ ಮೊಹಮ್ಮದ್ ಅಜರುದ್ಧಿನ್ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು.
ಸೊಗಸಾದ ಆಟವನ್ನು ಆಡಿದ ಮೊಹಮ್ಮದ್ ಬೌಂಡರಿ, ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಅಲ್ಲದೆ ಕರ್ನಾಟಕ ಬೌಲರ್ ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟಿಂಗ್ ನಡೆಸಿದರು. ಇವರು 47 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 95 ರನ್ ಬಾರಿಸಿ ಮಿಂಚಿದರು.
ಅಂತಿಮವಾಗಿ ಕೇರಳ 20 ಓವರ್ ಗಳಲ್ಲಿ 4 ವಿಕೆಟ್ ಗೆ 179 ರನ್ ಗಳಿಸಿದೆ. ಕರ್ನಾಟಕದ ಪರ ಜೆ.ಸುಚಿತ್ ಹಾಗೂ ವಿಜಯ್ ಕುಮಾರ್ ತಲಾ ಎರಡು ವಿಕೆಟ್ ಕಬಳಿಸಿದರು.
ಗುರಿ ಹಿಂಬಾಲಿಸಿದ ಕರ್ನಾಟಕದ ಪರ ದೇವದತ್ ಪಡಿಕ್ಕಲ್ (9), ನಾಯಕ ಮಯಾಂಕ್ ಅಗರ್ ವಾಲ್ (0), ಎಲ್.ಆರ್.ಚೇತನ್ (0), ಮನೀಶ್ ಪಾಂಡೆ (9) ರನ್ ಕಲೆ ಹಾಕುವಲ್ಲಿ ವಿಫಲರಾದರು, ಮಧ್ಯಮ ಕ್ರಮಾಂಕದಲ್ಲಿ ಲುವ್ನಿತ್ ಸಿಸೊಡಿಯಾ ಹಾಗೂ ಐಪಿಎಲ್ ನಲ್ಲಿ ಆಡಿರುವ ಅನುಭವ ಹೊಂದಿರುವ ಅಭಿನವ್ ಮನೋಹರ್ ತಂಡಕ್ಕೆ ಕೊಂಚ ಆಧಾರವಾದರು. ಅಲ್ಲದೆ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಲವ್ನಿತ್ 36 ಹಾಗೂ ಅಭಿನವ್ 46 ರನ್ ಸಿಡಿಸಿ ಮಿಂಚಿದರು. ಕೇರಳ ಪರ ವೈಶಾಕ್ ಚಂದ್ರನ್ 4 ವಿಕೆಟ್ ಕಬಳಿಸಿದರು.
Syed Mushtaq Ali Trophy, Karnataka, Kerala