ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಇಂದು ಕರ್ನಾಟಕ ಮತ್ತು ಮೇಘಾಲಯ ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ.
54 ವರ್ಷಗಳ ಬಳಿಕ ಫೈನಲ್ ತಲುಪಿರುವ ಕರ್ನಾಟಕ ಮತ್ತೆ ಪ್ರಶಸ್ತಿ ಗೆಲ್ಲಲು ಪಣ ತೊಟ್ಟರೆ ಮೇಘಾಲಯ ತಂಡ ಚೊಚ್ಚಲ ಪ್ರಯತ್ನದಲ್ಲೆ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಲು ಸಜ್ಜಾಗಿದೆ.
ಸೆಮಿಫೈನಲ್ನಲ್ಲಿ ಮೇಘಾಲಯ ಮಾಜಿ ಚಾಂಪಿಯನ್ ಪಂಜಾಬ್ ತಂಡವನ್ನು ಮಣಿಸಿ ಫೈನಲ್ಗೆ ಲಗ್ಗೆ ಹಾಕಿತು.
ಮಾಜಿ ಚಾಂಪಿಯನ್ಗಳಾದ ಪಂಜಾಬ್ ಮತ್ತು ಸರ್ವಿಸ್ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿದ್ದವು. ಆದರೆ ಸೆಮಿಯಲ್ಲಿ ಅಚ್ಚರಿ ರೀತಿಯಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದವು.
ಕರ್ನಾಟಕ ತಂಡ 1968-69ರಲ್ಲಿ ಕೊನೆಯ ಬಾರಿಗೆ ಸಂತೋಷ್ ಟ್ರೋಫಿ ಗೆದ್ದುಕೊಂಡಿತ್ತುಘಿ. ನಂತರ 1975-76ರ ಫೈನಲ್ನಲ್ಲಿ ಬಂಗಾಳ ವಿರುದ್ಧ ಸೋತು ರನ್ನರ್ಅಪ್ಗೆ ತೃಪ್ತಿಪಟ್ಟಿತ್ತು.
ಇಲ್ಲಿನ ಕಿಂಗ್ ಫಾಹದ್ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಅಂತಿಮ ಕದನದಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ಕಷ್ಟವಾಗಿದೆ.