ಆ ಆಲ್ ರೌಂಡರ್ ಗೆ ಚಾನ್ಸ್ ನೀಡಲೇಬೇಕು.. sanjay-bangar sportskarnataka
ದಕ್ಷಿಣಾ ಆಫ್ರಿಕಾ ಪ್ರವಾಸಲದಲ್ಲಿ ಹರಿಣಗಳ ಬೇಟೆಗೆ ಟೀಂ ಇಂಡಿಯಾದ ಹೆಬ್ಬಲಿಗಳು ಸಜ್ಜಾಗಿವೆ. ಸತತ ಜಯಗಳೊಂದಿಗೆ ಆತ್ಮವಿಶ್ವಾಸದಲ್ಲಿರುವ ಕೊಹ್ಲಿ ಸೇನೆ ಆಫ್ರಿಕಾ ನೆಲದಲ್ಲಿ ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಕಳೆದ 29 ವರ್ಷಗಳಲ್ಲಿ ಆಫ್ರಿಕಾ ನೆಲದಲ್ಲಿ ಒಂದೇ ಒಂದು ಸರಣಿ ಗೆಲ್ಲದ ಟೀಂ ಇಂಡಿಯಾ, ಈ ಬಾರಿ ಶತಯಾಗತಾಯ ಗೆದ್ದೇ ಗೆಲ್ಲಬೇಕು ಅನ್ನೋ ಹಠದೊಂದಿಗೆ ಕಣಕ್ಕೆ ಇಳಿಯಲಿದೆ.
ಕೆಲ ದಿನಗಳಿಂದ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದರೂ, ಅವುಗಳನ್ನ ಪಕ್ಕಕ್ಕೆ ಇಟ್ಟು ವಿರಾಟ್ ಬಳಗ ಸಫಾರಿ ನಾಡಿನಲ್ಲಿ ಹರಿಣಗಳ ಬೇಟೆಯಾಡುತ್ತೆ ಅನ್ನೋ ವಿಶ್ವಾಸ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ.
ದಕ್ಷಿಣಾಪ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಮೂರು ಟೆಸ್ಟ್ಗಳು, ಮೂರು ಏಕದಿನ ಪಂದ್ಯಗಳನ್ನ ಆಡಲಿವೆ. ಡಿಸೆಂಬರ್ 26 ರಂದು ಸೆಂಚೂರಿಯನ್ ನಲ್ಲಿ ಮೊದಲ ಟೆಸ್ಟ್ ಪ್ರಾರಂಭವಾಗಲಿದೆ. ಈಗಾಗಲೇ ದಕ್ಷಿಣಾಪ್ರಿಕಾ ತಲುಪಿರುವ ಟೀಂ ಇಂಡಿಯಾಗೆ ಆಫ್ರಿಕಾದ ಸಾಂಸ್ಕೃತಿಕ ಡ್ಯಾನ್ಸ್ ಮೂಲಕ ಸ್ವಾಗತ ಕೋರಲಾಗಿದೆ. ಭಾರತದ ಆಟಗಾರರು ಒಂದು ದಿನದ ಐಶೋಲೇಷನ್ನಲ್ಲಿ ಇರಲಿದ್ದಾರೆ.
ಇನ್ನು ಟೆಸ್ಟ್ ಸರಣಿಗೆ ಸ್ಟಾರ್ ಓಪನರ್ ರೋಹಿತ್ ಶರ್ಮಾ, ಆಲ್ ರೌಂಡರ್ ಗಳಾದ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಲ್ ರೌಂಡರ್ ಶರ್ದೂಲ್ ಠಾಕೂರ್ ಗೆ ನೂರಕ್ಕೆ ನೂರು ಅವಕಾಶ ಸಿಗಲೇಬೇಕು ಎಂದು ಭಾರತ ತಂಡ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗರ್ ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ ಹನ್ನೊಂದರಲ್ಲಿ “ಶಾರ್ದೂಲ್ ಠಾಕೂರ್ಗೆ ಖಂಡಿತವಾಗಿಯೂ ಸ್ಥಾನ ಸಿಗುತ್ತದೆ. ಏಕೆಂದರೆ ಕಳೆದ ಕೆಲವು ದಿನಗಳಿಂದ ಭಾರತ ಸಾಧಿಸಿದ ಪ್ರತಿ ಐತಿಹಾಸಿಕ ಜಯದಲ್ಲಿ ಶರ್ದೂಲ್ ಪಾತ್ರ ಪ್ರಮುಖವಾಗಿದೆ.
ಮುಖ್ಯವಾಗಿ ಶರ್ದೂಲ್ ಠಾಕೂರ್ ವಿದೇಶಿ ಪಿಚ್ ಗಳಲ್ಲಿ ಮಿಂಚಬಲ್ಲ ಆಟಗಾರನಾಗಿದ್ದಾನೆ. ಆಫ್ರಿಕಾದಂತಹ ಬೌನ್ಸಿ ಪಿಚ್ ಗಳಲ್ಲಿ ಠಾಕೂರ್, ಬೌಲಿಂಗ್ ಜೊತೆಗೆ ಉತ್ತಮವಾಗಿ ಬ್ಯಾಟ್ ಬೀಸಬಲ್ಲನು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಐತಿಹಾಸಿಕ ಸರಣಿಯಲ್ಲಿ ಭಾರತಕ್ಕೆ ಠಾಕೂರ್ ರಂತಹ ಆಟಗಾರ ತುಂಬಾ ಅವಶ್ಯಕ. ಇಂಗ್ಲೆಂಡ್ ನೆಲದಲ್ಲಿ ಭಾರತ ಗೆಲುವಿನ ಕೇಕೆ ಹಾಕಿದ್ದಾಗ ಆ ಸರಣಿಯಲ್ಲಿ ಶರ್ದೂಲ್ ನಿರ್ಣಾಯಕ ವಿಕೆಟ್ಗಳನ್ನು ಪಡೆದಿದ್ದರು ಎಂದು ಇಂಗ್ಲೆಂಡ್ ವಿರುದ್ಧ ಶರ್ದೂಲ್ ಆಟವನ್ನು ಸಂಜಯ್ ಸ್ಮರಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಸಾಧಾರಣವಾಗಿ ವಿದೇಶದಲ್ಲಿ ನಾಲ್ವರು ಫಾಸ್ಟ್ ಬೌಲರ್ಗಳು, ಒಬ್ಬ ಸ್ಪಿನ್ನರ್ ಪ್ಲಾನ್ ನೊಂದಿಗೆ ಕಣಕ್ಕಿಳಿಯುತ್ತಾರೆ. ಹೀಗಾಗಿ ಕೊಹ್ಲಿ ರಣತಂತ್ರದಲ್ಲಿ ಶರ್ದೂಲ್ ಪಾತ್ರ ಪ್ರಮುಖವಾಗಿರುತ್ತದೆ ಎಂದು ಬಂಗಾರ್ ಅಭಿಪ್ರಾಯಟ್ಟಿದ್ದಾರೆ.