ಸ್ಪಿನ್ನರ್ ಕೆ.ಗೌತಮ ಅವರ ಮಾರಕ ಸ್ಪಿನ್ ದಾಳಿಯ ನೆರೆವಿನಿಂದ ಕರ್ನಾಟಕ ತಂಡ ಆತಿಥೇಯ ಗೋವಾ ವಿರುದ್ಧ ಬೃಹತ್ ಇನ್ನಿಂಗ್ಸ್ ಮುನ್ನಡೆ ಮೇಲೆ ಕಣ್ಣಿಟ್ಟಿದೆ.
ಗೋವಾ ತಂಡ ಉತ್ತಮ ಹೋರಾಟ ನೀಡಿದ ಹೊರತಾಗಿಯೂ ಇನ್ನಿಂಗ್ಸ್ ಹಿನ್ನಡೆ ಭೀತಿ ಎದುರಿಸುತ್ತಿದೆ.
ಗುರುವಾರ ಮೊದಲ ಇನ್ನಿಂಗ್ಸ್ ಮುಂದುವರೆಸಿದ ಗೋವಾ ತಂಡ 8 ವಿಕೆಟ್ ನಷ್ಟಕ್ಕೆ 321 ರನ್ ಕಲೆ ಹಾಕಿದೆ. ಆತಿಥೇಯರು ಇನ್ನು 282 ರನ್ಗಳ ಹಿನ್ನಡೆ ಅನುಭವಿಸಿದ್ದಾರೆ.
ಎರಡನೆ ದಿನದಾಟದ ಪಂದ್ಯದಲ್ಲಿ ಗೋವಾ ತಂಡ 1 ವಿಕೆಟ್ ನಷ್ಟಕ್ಕೆ 45 ರನ್ ಕಲೆ ಹಾಕಿತ್ತು.ಮೂರನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಗೋವಾ ತಂಡಕ್ಕೆ ಸ್ಪಿನ್ನರ್ ಶುಭಾಂಗ್ ಹೆಗಡೆ ಆಘಾತ ನೀಡಿದರು.
ಸುಮಿರಾನ್ 30 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ ಶರತ್ಗೆ ಕ್ಯಾಚ್ ನೀಡಿದರು. ಸ್ನೇಹಾಲ್ ಕೌಥಾಂಕರ್ 21 ರನ್ಗಳಿಸಿದ್ದಾಗ ಗೌತಮ್ ಎಸೆತದಲ್ಲಿ ಮನೀಶ್ ಪಾಂಡೆಗೆ ಕ್ಯಾಚ್ ನೀಡಿದರು.
ಮತ್ತೆ ದಾಳಿಗಿಳಿದ ಶುಭಾಂಗ್ ಹೆಗಡೆ 87 ರನ್ ಗಳಿಸಿ ಮುನ್ನಗುತ್ತಿದ್ದ ಸುಯೇಶ್ ಪ್ರಭು ದೇಸಾಯಿ ಅವರನ್ನು ಎಲ್ಬಿ ಬಲೆಗೆ ಕೆಡವಿದರು.
ಮಧ್ಯಮ ಕ್ರಮಾಂಕದಲ್ಲಿ ಏಕಾಂತ್ ಕೆರ್ಕಾರ್ 5 ಗೌತಮ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು.
ಕರ್ನಾಟಕ ಪರ ಕೆ.ಗೌತಮ್ 109ಕ್ಕೆ 3, ವಿಜಯ್ ಕುಮಾರ್ ವೈಶಾಕ್ 46ಕ್ಕೆ 2, ಶುಭಾಂಗ್ ಹೆಗಡೆ 79ಕ್ಕೆ 2, ರೋನಿತ್ ಮೋರೆ 17ಕ್ಕೆ 1 ವಿಕೆಟ್ ಪಡೆದರು.
ಅರ್ಧ ಶತಕ ಸಿಡಿಸಿದ ಲಾಡ್, ನಾಯಕ ದರ್ಶನ್
ಅರ್ಧ ಶತಕ ಸಿಡಿಸಿದ ಸಿದ್ದೇಶ್ ಲಾಡ್ 63 ರನ್ ಗಳಿಸಿ ವೈಶಾಕ್ ಎಸೆತದಲ್ಲಿ ನಿಕಿನ್ ಜೋಸ್ಗೆ ಕ್ಯಾಚ್ ನೀಡಿದರು.
ಅರ್ಜುನ್ ತೆಂಡೂಲ್ಕರ್ ವೈಶಾಕ್ ಎಸೆತದಲ್ಲಿ ವಿಕೆಟ್ ಕೀಪರ್ ಶರತ್ಗೆ ಕ್ಯಾಚ್ ನೀಡಿ ಡಕೌಟ್ ಆದರು. ಮೋಹಿತ್ ಗೌತಮ್ಗೆ ವಿಕೆಟ್ ಒಪ್ಪಿಸಿದರು.
ನಾಯಕ ದರ್ಶನ್ ಮಿಸಾಲ್ ಏಕಾಂಗಿ ಹೋರಾಟ ಮಾಡಿ ಅಜೇಯ 66 ರನ್ ಗಳಿಸಿದರು. ಲಕ್ಷ್ಯ ಗರ್ಗ್ ಅಜೇಯ 20 ರನ್ ಗಳಿಸಿ ನಾಲ್ಕನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.