ವಿರಾಟ್ – ದ್ರಾವಿಡ್ ಗೆ `ಆ’ ಆಟಗಾರನದ್ದೇ ಚಿಂತೆ rahul dravid sportskarnataka
ದಕ್ಷಿಣಾ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಟೀಂ ಇಂಡಿಯಾ ಸಜ್ಜಾಗುತ್ತಿದೆ. ಈ ಮಧ್ಯೆ ನಾಯಕ ವಿರಾಟ್ ಕೊಹ್ಲಿ ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ ಗೆ ಹೊಸ ತಲೆ ನೋವು ಶುರುವಾಗಿದೆ. ಹರಿಣಗಳ ನಾಡಿನಲ್ಲಿ ಸರಣಿ ಗೆಲ್ಲಬೇಕು ಅಂದ್ರೆ ಬಲಿಷ್ಠವನ್ನು ಕಣಕ್ಕಿಳಿಸುವುದು ಅತ್ಯವಶ್ಯಕವಾಗಿದೆ. ಆದ್ರೆ ವಿರಾಟ್ ಮತ್ತು ದ್ರಾವಿಡ್ ಗೆ ಆಡುವ ಹನ್ನೊಂದರಲ್ಲಿ ಯಾರಿಗೆ ಚಾನ್ಸ್ ಕೊಡಬೇಕು ಎನ್ನುವ ಚಿಂತೆ ಶುರುವಾಗಿದೆ.
ಬ್ಯಾಡ್ ಪಾರ್ಮ್ ನಲ್ಲಿದ್ದರೂ ಅಜಿಂಕ್ಯಾ ರಹಾನೆಗೆ ಬಿಸಿಸಿಐ ಮತ್ತೊಂದು ಅವಕಾಶ ಕೊಟ್ಟಿದೆ. ಕಳೆದ ಆಫ್ರಿಕಾ ಪ್ರವಾಸದಲ್ಲಿ ರಹಾನೆ ಆಫ್ರಿಕಾ ನೆಲದಲ್ಲಿ ಅದ್ಭತವಾಗಿ ಆಡಿದ್ದರು. ಜೋಹಾನ್ಸ್ ಬರ್ಗ್ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಹಾನೆ ದಾರುಣವಾಗಿ ವಿಫಲರಾಗಿದ್ದರು. ಇದರಿಂದ ಉಪ ನಾಯಕನ ಪಟ್ಟವನ್ನು ಕಳೆದುಕೊಂಡ ರಹಾನೆ, ಲಾಸ್ಟ್ ಚಾನ್ಸ್ ಎಂಬಂತೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಆಗಿದ್ದಾರೆ.
ಇನ್ನು ರಹಾನೆ ಕಳೆದ 12 ಟೆಸ್ಟ್ ಪಂದ್ಯದಲ್ಲಿ 411 ರನ್ ಗಳಿಸಿದ್ದಾರೆ. ಇದೇ ಸಮಯದಲ್ಲಿ ಶ್ರೇಯಸ್ ಅಯ್ಯರ್, ಹನುಮ ವಿಹಾರಿ ಅಧ್ಭುತ ಪಾರ್ಮ್ ನಲ್ಲಿದ್ದಾರೆ. ಅದರಲ್ಲೂ ಶ್ರೇಯಸ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ನಲ್ಲಿ ಶತಕ ಸಿಡಿಸಿ ಆಫ್ರಿಕಾ ಟೂರ್ ಗೆ ಸೆಲೆಕ್ಟ್ ಆಗಿದ್ದಾರೆ. ಹೀಗಾಗಿ ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆ ನಾಯಕ- ಕೋಚ್ ಗೆ ತಲೆನೋವಾಗಿದೆ.