ಕಳೆದ ಆವೃತ್ತಿಗಳಲ್ಲಿ ನಿರಾಸೆ ಅನುಭವಿಸಿರುವ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇಂದು ಸೆಣಸಲಿವೆ.
ಮೊಹಾಲಿಯ ಬಿಂದ್ರಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಹೋರಾಡಲಿವೆ. ಉಭಯ ತಂಡಗಳಿಗೆ ಗಾಯದ ಸಮಸ್ಯೆ ಮತ್ತು ವಿದೇಶಿ ಆಟಗಾರರ ಅಲಭ್ಯತೆ ಆಯ್ಕೆ ಮಾಡಿಕೊಳ್ಳಲು ಕಠಿಣವಾಗಿದೆ.
ಹಲವಾರು ವರ್ಷಗಳಿಂದ ಈ ಎರಡು ತಂಡಗಳು ಕಳಪೆ ಪ್ರದರ್ಶನ ನೀಡಿ ಆತ್ಮವಂಚನೆ ಮಾಡಿಕೊಂಡಿವೆ. ತಂಡದ ಆಯ್ಕೆ ಕೂಡ ಅಸ್ಥಿರತೆಯಿಂದ ಕೂಡಿದ್ದು ಪರಿಣಾಮ ಬೀರಿದೆ.
ಮೇಲ್ನೋಟಕ್ಕೆ ಕೋಲ್ಕತ್ತಾ ತಂಡಕ್ಕಿಂತ ಪಂಜಾಬ್ ಬಲಿಷ್ಠವಾಗಿ ಕಾಣುತ್ತದೆ. ಆದರೆ ಜಾನಿ ಬೈರ್ಸ್ಟೊ ಅನುಪಸ್ಥಿತಿ ಪಂಜಾಬ್ಗೆ ಹಿನ್ನಡೆಯಾಗಿದೆ. ಸಿಖಂದರ್ ರಾಝಾ ಆಲ್ರೌಂಡರ್ ಲಬ್ಯವಿರುವುದು ಪಂಜಾಬ್ಗೆ ಚಿಂತೆಯನ್ನು ದೂರ ಮಾಡಿದೆ.
ಕೋಲ್ಕತ್ತಾ ತಂಡಕ್ಕೆ ಚಂದ್ರಕಾಂತ್ ಪಂಡೀತ್ ತಂಡದ ನೂತನ ಕೋಚ್ ಆಗಿದ್ದಾರೆ. ಇವರೊಂದಿಗೆ ಸಹ ಕೋಚ್ ಅಭಿಷೇಕ್ ನಾಯರ್ ಯೋಜನೆಗಳನ್ನು ರೂಪಿಸಲಿದ್ದಾರೆ. ನಾಯಕ ನಿತೀಶ್ ರಾಣಾ ಯೋಜನೆ ಪ್ರಕಾರ ತಂಡವನ್ನು ಮುನ್ನಡೆಸಲಿದ್ದಾರೆ.
ಇಂದಿನ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಹಾಗೂ ಲಿಟನ್ ದಾಸ್ ಆಡುತ್ತಿಲ್ಲ. ಕೆಕೆಆರ್ ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೀಸೆ, ವೆಂಕಟೇಶ್ ಅಯ್ಯರ್ ಅವರನ್ನು ನೆಚ್ಚಿಕೊಂಡಿದೆ.