ಪ್ರೊ ಕಬಡ್ಡಿ 9ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಇಂದು ಜೈಪುರ ಹಾಗು ಪುಣೇರಿ ತಂಡಗಳು ಪ್ರಶಸ್ತಿಗಾಗಿ ಹೋರಾಟ ಮಾಡಲಿವೆ.
ಮೊನ್ನೆ ಸೆಮಿಫೈನಲ್ ಪಂದ್ಯದಲ್ಲಿ ಜೈಪುರ ತಂಡ ಬೆಂಗಳೂರು ಬುಲ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತ್ತು. ಇನ್ನು ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ಪುಣೇರಿ ತಂಡ ಮೊನ್ನೆ ಸೆಮಿಫೈನಲ್ನಲ್ಲಿ ತಮಿಳ್ ತಲೈವಾಸ್ ತಂಡವನ್ನು 39-37 ಅಂಕಗಳಿಂದ ರೊಚಕವಾಗಿ ಗೆದ್ದು ಫೈನಲ್ ಪ್ರವೇಶಿಸಿತ್ತು.
ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಎರಡೂ ತಂಡಗಳು ಗುಂಪಿನಲ್ಲಿ ಮೊದಲ ಎರಡೂ ಸ್ಥಾನಗಳನ್ನು ಪಡೆದು ನೇರವಾಗಿ ಸೆಮಿÉೈನಲ್ ಪ್ರವೇಶಿಸಿದ್ದವು. ಉದ್ಘಾಟನಾ ಟೂರ್ನಿಯಲ್ಲಿ ಜೈಪುರ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ನಂತರ 2016ರಲ್ಲಿ ಜೈಪುರ ಫೈನಲ್ ಪ್ರವೇಶಿಸಿ ಪ್ರಶಸ್ತಿ ಗೆಲ್ಲುವಲ್ಲಿ ಎಡವಿತ್ತು.ಇದೀಗ ಮೂರನೆ ಬಾರಿ ಫೈನಲ್ ಪ್ರವೇಶಿಸಿದ್ದು ಪ್ರಶಸ್ತಿಗಾಗಿ ಅಂತಿಮ ಹೋರಾಟ ಮಾಡಲಿದೆ.
ಇನ್ನು ಪುಣೇರಿ ತಂಡ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು ಮೊದಲ ಪ್ರಯತ್ನದಲ್ಲೆ ಪ್ರಶಸ್ತಿ ಗೆಲ್ಲಲು ಹೋರಾಡಲಿದೆ.
ಪ್ರೊರ ಕಬಡ್ಡಿ ಇತಿಹಾಸದಲ್ಲಿ ಜೈಪುರ ಮತ್ತು ಪುಣೇರಿ ತಂಡಗಳು 20 ಬಾರಿ ಮುಖಾಮುಖಿಯಾಗಿವೆ. 10 ಬಾರಿ ಜೈಪುರ ಗೆದ್ದರೆ ಪುಣೆ ತಂಡ 8 ಪಂದ್ಯ ಗೆದ್ದುಕೊಂಡಿದೆ. 2 ಪಂದ್ಯಗಳು ಟೈನಲ್ಲಿ ಅಂತ್ಯ ಕಂಡಿದೆ.