ವಿರಾಟ್ ಕೊಹ್ಲಿಗೆ ಲಾಸ್ಟ್ ಚಾನ್ಸ್.. Virat Kohli sports karnataka
ಏಕದಿನ ತಂಡದ ನಾಯಕತ್ವದಿಂದ ವಜಾಗೊಂಡಿರುವ ವಿರಾಟ್ ಕೊಹ್ಲಿಗೆ ದಕ್ಷಿಣ ಆಫ್ರಿಕಾ ಸರಣಿ ಮಹತ್ವದ್ದಾಗಿದೆ. ಟೆಸ್ಟ್ ತಂಡದ ನಾಯಕತ್ವ ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ವಿರಾಟ್, ಹರಣಿಗಳ ನಾಡಿನಲ್ಲಿ ಸರಣಿ ಗೆಲ್ಲಲೇಬೇಕಾಗಿದೆ.
ಹೌದು..! ಸೀಮಿತ ಒವರ್ ಗಳ ನಾಯಕತ್ವದಿಂದ ವಿರಾಟ್ ಕೊಹ್ಲಿಗೆ ಬಿಸಿಸಿಐ ಗೇಟ್ ಪಾಸ್ ನೀಡಿದೆ. ಅಲ್ಲದೇ ಟೆಸ್ಟ್ ನಾಯಕತ್ವದಿಂದಲೂ ಆದಷ್ಟು ಬೇಗ ಅವರನ್ನ ಕೆಳಗಿಳಿಸಲು ಪ್ಲಾನ್ ಮಾಡುತ್ತಿದೆ ಅನ್ನೋ ಸುದ್ದಿ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ. ಇದರ ಭಾಗವಾಗಿಯೇ ಟೆಸ್ಟ್ ತಂಡದಲ್ಲಿ ಖಾಯಂ ಸದಸ್ಯರಲ್ಲದಿದ್ದರೂ ರೋಹಿತ್ ಶರ್ಮಾಗೆ ಟೆಸ್ಟ್ ತಂಡದ ಉಪನಾಯಕನ ಪಟ್ಟವನ್ನ ನೀಡಿದೆ. ಆ ಮೂಲಕ ವಿರಾಟ್ ಕೊಹ್ಲಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ದಕ್ಷಿಣಾ ಆಫ್ರಿಕಾ ಸರಣಿಯಲ್ಲಿ ವಿರಾಟ್ ನಾಯಕನಾಗಿ ವಿಫಲಾದರೇ ಅವರಿಗೆ ಗೇಟ್ ಪಾಸ್ ನೀಡೋದು ಪಕ್ಕಾ ಎನ್ನಲಾಗುತ್ತಿದೆ. ಇದಲ್ಲದೇ ವಿರಾಟ್ ಬ್ಯಾಟರ್ ಆಗಿ ಕೂಡ ಮಿಂಚಲೇಬೇಕಾದ ಅನಿವಾರ್ಯತೆ ಇದೆ. ಕಳೆದ ವರ್ಷಗಳಿಂದ ವಿರಾಟ್ ರನ್ ಬರ ಎದುರಿಸುತ್ತಿದ್ದಾರೆ. ಹೀಗಾಗಿ ನಾಯಕನಾಗಿ ಮತ್ತು ಬ್ಯಾಟರ್ ಆಗಿ ದಕ್ಷಿಣ ಆಪ್ರಿಕಾ ಟೂರ್ನಿಯಲ್ಲಿ ವಿರಾಟ್ ಮಿಂಚಲೇಬೇಕಾಗಿದೆ.
ಇನ್ನು ಈ ವಿಚಾರವಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ಮಾತನಾಡಿದ್ದು, ಟೀಂ ಇಂಡಿಯಾ ಇಂಗ್ಲೆಂಡ್, ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಗೆ ಗೆದ್ದಿದೆ. ಆದರೆ… ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲೋದು ಅಷ್ಟು ಸುಲಭವಲ್ಲ. ಟೀಂ ಇಂಡಿಯಾ ಆಫ್ರಿಕಾ ನೆಲದಲ್ಲಿ ಒಂದೇ ಒಂದು ಸರಣಿ ಕೂಡ ಗೆದ್ದಿಲ್ಲ.
ವಾಸ್ತವವಾಗಿ ವಿರಾಟ್ ಕೊಹ್ಲಿಗೆ ದಕ್ಷಿಣಾಫ್ರಿಕಾ ಪ್ರವಾಸದ ಅತಿದೊಡ್ಡ ಸವಾಲು. ನಾಯಕನಾಗಿ ತನ್ನನ್ನು ತಾನು ಸಾಬೀತುಪಡಿಸಲು ಇದೇ ಕೊನೆಯ ಅವಕಾಶ. ಬ್ಯಾಟರ್ ಆಗಿ ರನ್ಗಳನ್ನು ಸಾಧಿಸಬೇಕು.. ನಾಯಕನಾಗಿ ತಂಡವನ್ನು ವಿಜಯತೀರಗಳಿಗೆ ಸೇರಿಸಬೇಕು ಎಂದಿದ್ದಾರೆ.
ಅಲ್ಲದೇ ಬಿಸಿಸಿಐಗೆ ಉತ್ತರ ಕೊಡಲು ವಿರಾಟ್ ಗೆ ದಕ್ಷಿಣ ಆಪ್ರಿಕಾ ಪ್ರವಾಸ ಸೂಕ್ತ ಅವಕಾಶವಾಗಿದೆ ಎಂದು ದಾನೀಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಟೆಸ್ಟ್ ತಂಡವನ್ನು ವಿರಾಟ್ ಮುನ್ನಡೆಸಿದ್ದರೇ, ಏಕದಿನ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.