ಸುನಿಲ್ ಚೆಟ್ರಿ ಅವರ ವಿವಾದಾತ್ಮಕ ಫ್ರೀ ಕಿಕ್ನಿಂದಾಗಿ ಕೇರಳ ಬ್ಲಾಸ್ಟರ್ಸ್ ವಾಕ್ ಆಫ್ ಮಾಡಿದ ಘಟನೆ ನಡೆಯಿತು. ಇಂಡಿಯನ್ ಸೂಪರ್ ಲೀಗ್ನಲ್ಲಿ ಬೆಂಗಳೂರು ಎಫ್ ಸಿ ಸೆಮಿಫೈನಲ್ ತಲುಪಿದೆ.
ಬೆಂಗಳೂರಿನ ಕಂಠೀರವ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹೆಚ್ಚುವರಿ 7ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಫ್ರಿಕಿಕ್ ನೆರವಿನಿಂದ ಗೋಲು ಹೊಡೆದರು. ಆದರೆ ಆ ಸಂದರ್ಭದಲ್ಲಿ ಗೋಲ್ ಕೀಪರ್ ಗೋಲ್ ಪೋಸ್ಟ್ ಬಳಿ ಇರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿದೆ.
ರೆಫರಿ ಗೋಲು ಎಂದು ಘೋಷಿಸಿದಾಗ ಕೇರಳ ಕೇರಳ ಆಟಗಾರರು ಮೈದಾನದಿಂದ ಹೊರ ನಡೆದರು. 20 ನಿಮಿಷದ ಬಳಿಕವೂ ಬ್ಲಾಸ್ಟರ್ಸ್ ಆಟಗಾರರು ಬಾರದಿದ್ದಾಗ ಬೆಂಗಳೂರು ಎಫ್ ಸಿ ವಿಜಯಿ ತಂಡ ಎಂದು ಘೋಷಿಸಲಾಯಿತು.
ಬೆಂಗಳೂರು ತಂಡದ ಕೋಚ್ ಸೈಮನ್ ಗ್ರೆಸನ್ ಬ್ಲಾಸ್ಟರ್ಸ್ ತಂಡದ ಆಟಗಾರರಿಗೆ ಮೈದಾನ ಬಿಟ್ಟು ಹೊರಹೋಗದಂತೆ ಮನವೊಸಿರುವುದಾಗಿ ತಿಳಿಸಿದ್ದಾರೆ.
ನಮಗೆ ಫ್ರೀ ಕಿಕ್ ಸಿಕ್ಕಿದಾಗ ಸುನಿಲ್ ಚೆಟ್ರಿ ರೆಫರಿ ಬಳಿ ಫ್ರೀಕಿಕ್ ಅನ್ನು ಬೇಗ ತೆಗೆದುಕೊಳ್ಳಬಹುದಾ ಎಂದು ಕೇಳಿದ್ದಾರೆ. ಅದಕ್ಕೆ ರೆಫರಿ ಹೌದು ಎಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ಕುರಿತು ಸುನಿಲ್ ಚೆಟ್ರಿ ಏನಾಯಿತು ಎಂಬುದ ಕುರಿತು ಅಲೋಕಿಸುತ್ತಿರುವುದಾಗಿ ತಿಳಿಸಿದ್ದಾರೆ.