ಭಾರತ – ಆಸ್ಟ್ರೇಲಿಯಾ ನಡುವಿನ ಬಾರ್ಡರ್ –ಗವಾಸ್ಕರ್ ಟ್ರೋಫಿ ನಡುವಿನ ಟೆಸ್ಟ್ ಸರಣಿಗೆ ಕೌಂಟ್ಡೌನ್ ಶುರುವಾಗಿದೆ.
ಎರಡೂ ತಂಡಗಳು ಪ್ರತಿಷ್ಠಿತ ಸರಣಿಗೆ ನೆಟ್ಸ್ ನಲ್ಲಿ ಬೆವರಿಳಿಸಿ ಕಠಿಣ ಅಭ್ಯಾಸ ಮಾಡುತ್ತಿವೆ.
ಆಸ್ಟ್ರೇಲಿಯಾ ತಂಡ ಈಗಾಗಲೇ ಭಾರತಕ್ಕೆ ಬಂದಿದ್ದು ಕಠಿಣ ಅಭ್ಯಾಸ ಮಾಡುತ್ತಿದೆ. ಸರಣಿ ಗೆಲ್ಲಲು ತಂತ್ರಕ್ಕೆ ಪ್ರತಿ ತಂತ್ರ ಮಾಡಿ ಸರಣಿ ಗೆಲ್ಲಲು ಪಣತೊಟ್ಟಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ಮಾಡುತ್ತಿರುವ ಆಸ್ಟ್ರೇಲಿಯಾ ತಂಡ ಕಳಪೆ ಪಿಚ್ ನಲ್ಲಿ ಅಭ್ಯಾಸ ಮಾಡಿ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಪ್ಲ್ಯಾನ್ ಮಾಡಿದೆ.
ಆಸ್ಟ್ರೇಲಿಯಾದ ಮುಖ್ಯ ಕೋಚ್ ಆ್ಯಂಡ್ರೀವ್ ಮೆಕ್ ಡೋನಾಲ್ಡ್ ಸ್ಪಿನ್ ಸಲಹೆಗಾರ ಡೇನಿಯಲ್ ವೆಟ್ಟೋರಿ ಆರ್ಸಿಬಿ ಮತ್ತು ಕೆಎಸ್ಸಿಎ ನೆರವಿನೊಂದಿಗೆ ಕಠಿಣ ಅಭ್ಯಾಸ ನಡೆಸುತ್ತಿದೆ.
ಆಸ್ಟ್ರೇಲಿಯಾ ತಂಡ ನಿಧಾನಗತಿಯ ಪಿಚ್ ಮತ್ತು ಬೌನ್ಸ್ ಏಳುವ ಪಿಚ್ನಲ್ಲಿ ಅಭ್ಯಾಸ ಮಾಡಿ ಸವಾಲುಗಳನ್ನು ಎದುರಿಸುತ್ತಿದೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಾಗ್ಪುರ, ದೆಹಲಿ, ಅಹಮದಾಬಾದ್ ಮತ್ತು ಧರ್ಮಾಶಾಲಾದಲ್ಲಿ ಪದ್ಯ ಆಡಲಿದೆ.