ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಆಟ ಗೆಲುವಿನೊಂದಿಗೆ ಮುಕ್ತಾಯವಾಗಿದೆ. ನಮಿಬಿಯಾ ವಿರುದ್ಧ 9 ವಿಕೆಟ್ಗಳ ಗೆಲುವಿನೊಂದಿಗೆ ಟಿ20ಯಲ್ಲಿ ವಿರಾಟ್ ಕೊಹ್ಲಿಯ ಕ್ಯಾಪ್ಟನ್ಸಿ ಅಂತ್ಯವಾಗಿದೆ. ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಕೂಡ ಟೀಮ್ ಇಂಡಿಯಾದಿಂದ ದೂರವಾಗಲಿದ್ದಾರೆ.
ದುಬೈನಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ಆಟ ಆರಂಭಿಸಿದ ನಮಬಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಜಸ್ಪ್ರಿತ್ ಬುಮ್ರಾ 14 ರನ್ಗಳಿಸಿದ್ದ ಮೈಕಲ್ ವಾನ್ ಲಿಂಗನ್ ವಿಕೆಟ್ ಪಡೆದರು. ಕ್ರೆಗ್ ವಿಲಿಯಮ್ಸ್ ಖಾತೆಯನ್ನೇ ತೆರೆಯಲಿಲ್ಲ. ಸ್ಟೀಫನ್ ಬಾರ್ಡ್ 21 ರನ್ಗಳಿಸಿ ಔಟಾದರು.
ಆಶ್ವಿನ್ ಜಾನ್ ನಿಕೊಲ್ ಲೊಫ್ಟಿ ಈಟನ್, ಗೆರಾಲ್ಡ್ ಎರಾಸ್ಮಸ್ ಮತ್ತು ಝೆನ್ ಗ್ರೀನ್ ವಿಕೆಟ್ ಪಡೆದರು. ಡೇವಿಡ್ ವೀಸ್ 26 ರನ್ಗಳಿಸಿ ಔಟಾದರು. 20 ಓವರುಗಳಲ್ಲಿ ನಮಬಿಯಾ 8 ವಿಕೆಟ್ ಕಳೆದುಕೊಂಡು 132 ರನ್ಗಳಿಸಿತು.
ಚೇಸಿಂಗ್ ಆರಂಭಿಸಿದ ಟೀಮ್ ಇಂಡಿಯಾ ರೋಹಿತ್ ಮತ್ತು ರಾಹುಲ್ ಭರ್ಜರಿ ಆರಂಭ ತಂದುಕೊಟ್ಟರು. ರೋಹಿತ್ ಕೇವಲ 37 ಎಸೆತಗಳಲ್ಲಿ 56 ರನ್ ಸಿಡಿಸಿದರು. ರಾಹಲ್ 36 ಎಸೆತಗಳಲ್ಲಿ ಅಜೇಯ 54 ರನ್ಗಳಿಸಿದರು. ಸೂರ್ಯ ಕುಮಾರ್ ಯಾದವ್ ಅಜೇಯ 25 ರನ್ಗಳಿಸಿದರು. ಟೀಮ್ ಇಂಡಿಯಾ 15.1 ಓವರುಗಳಲ್ಲಿ ಗುರಿ ತಲುಪಿ 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ವಿರಾಟ್ ಕೊಹ್ಲಿಯ ಟಿ20 ಕ್ಯಾಪ್ಟನ್ಸಿಗೆ ಗೆಲುವಿನ ಉಡುಗೊರೆ ನೀಡಿತು.