ರೀ ಎಂಟ್ರಿಗಾಗಿ ಬೆವರಿಳಿಸುತ್ತಿದ್ದಾರೆ ಹಾರ್ದಿಕ್ ಪಾಂಡ್ಯ Hardik Pandya saaksha tv
ಹಾರ್ದಿಕ್ ಪಾಂಡ್ಯ… ಟೀಮ್ ಇಂಡಿಯಾದ ಹೊಡಿಬಡಿ ಆಟಗಾರ. ಆದ್ರೆ ವಿಚಿತ್ರ ವ್ಯಕ್ತಿತ್ವದ ಕ್ರಿಕೆಟಿಗ. ಎದುರಾಳಿ ಬೌಲರ್ ಯಾರೇ ಆಗಿರಲಿ.. ಹಾರ್ದಿಕ್ ಪಾಂಡ್ಯ ಕ್ಯಾರೇ ಮಾಡಲ್ಲ. ಎಷ್ಟೇ ವೇಗದ ಎಸೆತವಿರಲಿ, ನಿಖರವಾದ ಎಸೆತವಿರಲಿ.. ಹಾರ್ದಿಕ್ ಪಾಂಡ್ಯ ಜಗ್ಗದೇ ಬ್ಯಾಟ್ ಬೀಸುತ್ತಾರೆ. ಅದು ಹೊಂದಾಣಿಕೆಯ ಆಟಕ್ಕೂ ಸೈ, ಏಕಾಂಗಿ ಹೋರಾಟಕ್ಕೂ ಜೈ ಅನ್ನೋ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ, ಅತೀ ಕಡಿಮೆ ಅವಧಿಯಲ್ಲಿ ಟೀಂ ಇಂಡಿಯಾದಲ್ಲಿ ಸ್ಟಾರ್ ಪಟ್ಟಗಿಟ್ಟಿಸಿಕೊಂಡರು. ಆದ್ರೆ ಬೆನ್ನು ಮೂಳೆಯ ಇಂಚೂರಿಗೆ ಒಳಗಾದ ಹಾರ್ದಿಕ್ ಮತ್ತೆ ಮೊದಲಿನಾಟ ಆಡುವಲ್ಲಿ ವಿಫಲಾಗಿದ್ದಾರೆ.
ಸದ್ಯ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಹಾರ್ದಿಕ್ ಮತ್ತೆ ಫಿಟ್ ನೆಸ್ ಸಾಧಿಸಲು ಮೈದಾನದಲ್ಲಿ ಕಷ್ಟಪಡುತ್ತಿದ್ದಾರೆ. ಪಾಂಡ್ಯ ಪ್ರಸ್ತುತ ಮುಂಬೈನಲ್ಲಿರುವ ರಿಹಾಬಿಲಿಟೇಷನ್ ಸೆಂಟರ್ ನಲ್ಲಿ ಬೆವರು ಹರಿಸುತ್ತಿದ್ದಾರೆ.
ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ, ಮೊದಲಿನಂತೆ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸಲು ವಿಫಲಾಗುತ್ತಿದ್ದಾರೆ. ಯುಎಇ ಯಲ್ಲಿ ನಡೆದ ಐಪಿಎಲ್ ನಲ್ಲಿ ಮಕಾಡೆ ಮಲಗಿದ್ದ ಹಾರ್ದಿಕ್, ಬಳಿಕ ಟಿ 20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಮಂಕಾಗಿದ್ದರು. ಇದರಿಂದಾಗಿ ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಗೆ ಆಯ್ಕೆ ಆಗಲಿಲ್ಲ.
ಇನ್ನ 2021ರಲ್ಲಿ ಆರು ಏಕದಿನ ಪಂದ್ಯಗಳಲ್ಲಾಡಿರುವ ಹಾರ್ದಿಕ್ ಪಾಂಡ್ಯ, ಕೇವಲ 165 ರನ್ ಗಳನ್ನ ಮಾತ್ರ ಗಳಿಸಿದ್ದಾರೆ. 11 ಟಿ 20 ಪಂದ್ಯಗಳಲ್ಲಿ 165 ರನ್ ಗಳಷ್ಟೆ ಗಳಿಸಿದ್ದಾರೆ. ಇನ್ನು ಬೆನ್ನು ನೋವಿನಿಂದಾಗಿ ಹಾರ್ದಿಕ್ ಬೌಲಿಂಗ್ ಮಾಡಲಿಲ್ಲ. ಮಾಡಿದ್ರೂ ಅದು ಒಂದೆರಡು ಓವರ್ ಗಳಿಗೆ ಸೀಮಿತವಾಗಿದೆ.
ಹೀಗಾಗಿ ಹಾರ್ದಿಕ್ ಪಾಂಡ್ಯ ಸ್ವತಃ ಬಿಸಿಸಿಐಗೆ ಪತ್ರ ಬರೆದು, ದಕ್ಷಿಣಾ ಆಫ್ರಿಕಾ ಪ್ರವಾಸಕ್ಕೆ ತಮ್ಮನ್ನು ಪರಿಗಣಿಸದಂತೆ ಮನವಿ ಮಾಡಿಕೊಂಡಿದ್ದರು. ಸಂಪೂರ್ಣವಾಗಿ ಫಿಟ್ ಆಗುವವರೆಗೂ ಟೀಂಇಂಡಿಯಾಗೆ ವಾಪಸ್ ಆಗುವುದಿಲ್ಲ ಎಂದು ಹಾರ್ದಿಕ್ ತಿಳಿಸಿದ್ದಾರೆ. ಅದರ ಭಾಗವಾಗಿಯೇ ಹಾರ್ದಿಕ್ ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯಿಂದಲೂ ಹೊರಗಿದ್ದಾರೆ.