ರುತುರಾಜ್ ಗಾಯಕ್ವಾಡ್ ಗೆ ಆಫ್ರಿಕಾ ಟಿಕೆಟ್..! Ruthuraj Gayakwad sports karnataka
ಟೀಂ ಇಂಡಿಯಾದ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಉತ್ತಮ ಲಯದಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸಿದ್ದ ರುತುರಾಜ್, ಕೇವಲ ಐದು ಪಂದ್ಯಗಳಲ್ಲಿ 603 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಸೆಂಚೂರಿಗಳು ಸೇರಿವೆ. ದೇಶಿ ಟೂರ್ನಿಯಲ್ಲಿ ಅದ್ಭತ ಪ್ರದರ್ಶನ ನೀಡುತ್ತಿರುವ ರುತುರಾಜ್ ಮೇಲೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ.
ಅದರಂತೆ ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ರುತುರಾಜ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅವರ ಆಯ್ಕೆ ಖಚಿತ ಎಂದಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ನಾವು ಮೊದಲು ರುತುರಾಜ್ ಗಾಯಕ್ವಾಡ್ ಬಗ್ಗೆ ಮಾತನಾಡಬೇಕು. ರುತುರಾಜ್ ಆ ಟೂರ್ನಿಯಲ್ಲಿ ನಾಲ್ಕು ಸೆಂಚೂರಿಗಳನ್ನ ಸಿಡಿಸಿದ್ದಾರೆ. ಅದರಲ್ಲೂ ಸತತವಾಗಿ ಮೂರು ಶತಕಗಳನ್ನ ಬಾರಿಸಿದ್ದಾರೆ. ಅದಷ್ಟೆ ಅಲ್ಲದೇ ಆತನ ವಿಕೆಟ್ ಪಡೆಯಲು ಬೌಲರ್ ಗಳು ಪರದಾಡಿದರು ಎಂದು ಹೇಳಿದ್ದಾರೆ.
ಆತನ ಬ್ಯಾಟಿಂಗ್ ನಾನು ನೋಡಿದೇನೆ, ರುತುರಾಜ್ ಮಕ್ಕಳ ಜೊತೆ ಆಡಿದಂತೆ ನನಗನಿಸಿತ್ತು. ಫಾಸ್ಟ್ ಬೌಲರ್ ಗಳ ಎದುರು ಅವರು ಅದ್ಭುತವಾಗಿ ಆಡಿದ್ದಾರೆ. ಉತ್ತಮವಾಗಿ ಸ್ವೀಪ್ ಶಾಟ್ ಗಳನ್ನ ಆಡಿದ್ದಾರೆ. ವೇಗದ ಬೌಲರ್ ಗಳಿಗೆ ಸ್ಪೀಪ್ ಶಾಟ್ ಗಳನ್ನ ಆಡುವುದು ಆತನೊಬ್ಬನೇ. ಬೌಲರ್ ಗಳು ಚೆನ್ನಾಗಿ ಬೌಲಿಂಗ್ ಮಾಡಿದ್ರೂ, ರುತುರಾಜ್ ಉತ್ತಮವಾದ ಲಯದಲ್ಲಿ ಕಾಣಿಸಿಕೊಂಡರು ಎಂದು ಆಕಾಶ್ ಚೋಪ್ರಾ ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಉತ್ತಮ ಫಾರ್ಮ್ ನಲ್ಲಿರುವ ಆತನನ್ನು ಆಯ್ಕೆ ಸಮಿತಿ ಪರಿಗಣಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.