ಬಾಲಿ: ಒಲಿಂಪಿಕ್ಸ್ ನಲ್ಲಿ ಎರಡು ಪದಕದ ವಿಜೇತೆ ಭಾರತದ ಪಿವಿ ಸಿಂಧು ಅವರು ಇಂಡೋನೇಷ್ಯಾ ಬ್ಯಾಡ್ಮಿಂಟನ್ ಓಪನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ.
ಸಿಂಧು 21-15, 9-21, 14-21 ರಿಂದ ಥಾಯ್ಲೆಂಡ್ ನ ರಚನೋಕ್ ಇಂಟನಾನ್ ಅವರ ವಿರುದ್ಧದ 54 ನಿಮಿಷದ ಹೋರಾಟದಲ್ಲಿ ಸೋಲು ಕಂಡಿದ್ದಾರೆ. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಸಿಂಧು ಪದಕ ಗೆಲ್ಲುವ ಆಸೆಯನ್ನು ಕೈ ಚೆಲ್ಲಿದರು.
ಮೊದಲ ಗೇಮ್ ನಲ್ಲಿ ಅಂಕಗಳನ್ನು ಕಲೆ ಹಾಕುತ್ತಾ ಸಾಗಿದ ಪಂದ್ಯದಲ್ಲಿ ಸಿಂಧು ಅರ್ಹ ಮುನ್ನಡೆ ಸಾಧಿಸಿದರು. ಅಲ್ಲದೆ ಗೆಲುವಿಗೆ ಹತ್ತಿರ ನಿಂತರು. ಆದರೆ ಎರಡನೇ ಗೇಮ್ ನಲ್ಲಿ ಥಾಯ್ಲೆಂಡ್ ಆಟಗಾರ್ತಿ ಅಮೋಘ ಪ್ರದರ್ಶನ ನೀಡಿ ಸತತ ಅಂಕಗಳನ್ನು ಕಲೆ ಹಾಕುತ್ತಾ ಸಾಗಿದರು. ಈ ಗೇಮ್ ನಲ್ಲಿ ರಚನೋಕ್ ಇಂಟನಾನ್ ಸತತ ಆರು ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು.
ಮೂರನೇ ಹಾಗೂ ನಿರ್ಣಾಯಕ ಗೇಮ್ ನಲ್ಲಿ ಸಿಂಧು ಹಾಗೂ ಎದುರಾಳಿ ಆಟಗಾರ್ತಿಯ ನಡುವೆ ಜಿದ್ದಾಜಿದ್ದಿನ ಪಂದ್ಯ ಕಂಡು ಬಂದಿತು. 4-4ರಿಂದ ಸಮಾನಾಗಿ ಸಾಗುತ್ತಿದ್ದ ಪಂದ್ಯದಲ್ಲಿ ರಚನೋಕ್ ಇಂಟನಾನ್ ಸ್ಥಿರ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರು.
ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯ್ ರಾಜ್ ರೆಡ್ಡಿ, ಚಿರಾಗ್ ಶೆಟ್ಟಿ ಆತಿಥೇಯ ಆಟಗಾರರ ವಿರುದ್ಧ ನಿರಾಸೆ ಅನುಭವಿಸಿದರು.