ರೋಹಿತ್ ಪಡೆ ನೇತೃತ್ವದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲು ಕೇರಳದ ತಿರುವನಂತಪುರಂಗೆ ಬಂದಿಳಿದಿದೆ. ತಿರುವನಂತಪುರಂಗೆ ಬಂದಾಗ ಟೀಮ್ ಇಂಡಿಯಾ ಮುಜುಗರ ಎದುರಿಸಿತು.
ಟೀಮ್ ಇಂಡಿಯಾ ಮೊನ್ನೆ ತಾನೆ ಆಸ್ಟ್ರೇಲಿಯಾ ವಿರುದ್ಧ ವಿರುದ್ಧ ರೋಚಕವಾಗಿ 2-1 ಅಂತರದಿಂದ ಸರಣಿ ಗೆದ್ದುಕೊಂಡಿತು.ಇದರ ಬೆನ್ನಲ್ಲೆ ರೋಹಿತ್ ಪಡೆಗೆ ದಕ್ಷಿಣ ಆಫ್ರಿಕಾ ಸವಾಲು ಎದುರಾಗಿದೆ. ತಿರುವನಂತಪುರಂಗೆ ಬಂದ ಭಾರತ ತಂಡಕ್ಕೆ ಕೇರಳ ಕ್ರಿಕೆಟ್ ಅಸೋಸಿಯೇಷನ್ ಭವ್ಯ ಸ್ವಾಗತ ನೀಡಿತು. ಬಸ್ ಏರಿ ಕುಳಿತ ಟೀಮ್ ಇಂಡಿಯಾಗೆ ಕೇರಳ ಕ್ರಿಕೆಟ್ ಅಭಿಮಾನಿಗಳಿಂದ ಮುಜುಗರ ಉಂಟಾಯಿತು. ಕೇರಳ ಫ್ಯಾನ್ಸ್ ಸಂಜು ಸಂಜು ಎಂದು ಕೂಗಿದರು.
ಇದಕ್ಕೆ ಕಾರಣ ವಿಕೆಟ್ ಕೀಪರ್ ಕಮ್ ಬ್ಯಾಟರ್ ಸಂಜು ಸ್ಯಾಮ್ಸನ್ ವಿಶ್ವಕಪ್, ಆಸಿಸ್ ಮತ್ತು ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗದಿರುವುದು.
ಸಂಜು ಸ್ಯಾಮ್ಸನ್ ಅವರನ್ನು ಬಿಸಿಸಿಐ ಕಡೆಗಣಿಸಿದಕ್ಕೆ ಅಭಿಮಾನಿಗಳು ಭಾರತ ಆಟಗಾರರೆದುರಿಗೆ ಸಂಜು ಸಂಜು ಎಂದು ಕೂಗಿದ್ದಾರೆ.
ತಂಡದ ಬಸ್ ನಲ್ಲಿದ್ದ ಸೂರ್ಯ ಕುಮಾರ್ ತಮ್ಮ ಮೊಬೈಲ್ ನಲ್ಲಿ ಸಂಜು ಸ್ಯಾಮ್ಸನ್ ಅವರ ಫೋಟೋ ತೋರಿಸಿದ್ದಾರೆ. ಇನ್ನು ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಮತ್ತು ಯಜ್ವಿಂದರ್ ಚಾಹಲ್ ಅಭಿಮಾನಿಗಳ ಅಬ್ಬರವನ್ನು ನೋಡಿ ಇನ್ ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.
ಸದ್ಯ ಸಂಜು ಸ್ಯಾಮನ್ಸ ನ್ಯೂಜಿಲೆಂಡ್ ಎ ತಂಡದ ವಿರುದ್ಧ ಭಾರತ ಎ ತಂಡದ ಪರವಾಗಿ ನಾಯಕರಾಗಿ ಆಡುತ್ತಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ಬುಧವಾರ ತಿರುವನಂತಪುರಂನ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆಯಲಿದೆ.
ಪಂದ್ಯದ ವೇಳೆ ಕೂಡ ಸಂಜು ಹೆಸರು ಕೂಗುವುದಾಗಿ ಅಭಿಮಾನಿಗಳು ಹೇಳಿದ್ದಾರೆ.