ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ ಗಾಯದ ಸಮಸ್ಯೆ ಗಂಭೀರವಾಗಿರುವುದರಿಂದ ಐಪಿಎಲ್ನಿಂದ ಹೊರ ನಡೆದಿದ್ದಾರೆ.
ತಂಡದ ವೇಗಿ ಜಯದೇವ್ ಉನಾದ್ಕಟ್ ಅವರ ಗಾಯ ಕೂಡ ಗಂಭೀರವಾಗಿದ್ದು ಟೂರ್ನಿಯಿಂದ ಹೊರ ನಡೆಯುವ ಸಾಧ್ಯತೆ ಹೆಚ್ಚಿದೆ.
ಜೂ.7ರಿಂದ ಜೂ.11ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಕೆ.ಎಲ್.ರಾಹುಲ್ ಫಿಟ್ ಆಗಬೇಕಿರುವುದರಿಂದ ಕನ್ನಡಿಗ ರಾಹುಲ್ ಸಮಯದ ವಿರುದ್ಧ ಹೋರಾಡಬೇಕಿದೆ. ಸದ್ಯ ರಾಹುಲ್ ಲಖನೌ ತಂಡದೊಂದಿಗೆ ಇದ್ದಾರೆ.
ಮುಂಬೈನಲ್ಲಿ ರಾಹುಲ್ಗೆ ಸ್ಕ್ಯಾನಿಂಗ್ ನಡೆಯಲಿದೆ. ಜಯದೇವ್ಗೆ ಕೂಡ ಇಲ್ಲಿಯೇ ತಪಾಸಣೆ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.