ಕರ್ನಾಟಕ ತಂಡ 4-0ಯಿಂದ ತಮಿಳುನಾಡು ವಿರುದ್ಧ ದಕ್ಷಿಣ ವಲಯ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಜಯ ಸಾಧಿಸಿದೆ.
ವಿಜೇತ ತಂಡದ ಪರ ಸುಧೀರ್ ಹ್ಯಾಟ್ರಿಕ್ ಬಾರಿಸಿ ಮಿಂಚಿದರು. ಇವರು 42, 53, 75ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಕಮಲೇಶ್ ಪಿ. 11ನೇ ನಿಮಿಷದಲ್ಲಿ ಅಂಕ ಸಂಪಾದಿಸಿದರು.
ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ತಂಡದ ಎದುರಾಳಿಯ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ಶ್ರಮಿಸಿತು. ಅಲ್ಲದೆ ಆರಂಭದ 11ನೇ ನಿಮಿಷದಲ್ಲಿ ಕಮಲೇಶ್ ಭರ್ಜರಿ ಪ್ರದರ್ಶನ ನೀಡಿ ಎದುರಾಳಿ ಗೋಲ್ ಕೀಪರ್ ಅವರನ್ನು ಮಣಿಸಿದರು. ಈ ಅವಧಿಯಲ್ಲಿ ಸುಧೀರ್ ಉತ್ತಮ ಕಾಲ್ಚಳಕದ ಪ್ರದರ್ಶನ ನೀಡಿದರು.
ಎರಡನೇ ಅವಧಿಯಲ್ಲಿ ಸುಧೀರ್ ಆರಂಭದಲ್ಲೇ ಒಂದು ಗೋಲು ಬಾರಿಸಿ ತಂಡದ ಗೋಲಿನ ಸಂಖ್ಯೆಯನ್ನು ಹೆಚ್ಚಿಸಿದರು. 75ನೇ ನಿಮಿಷದಲ್ಲಿ ಸಿಕ್ಕ ಅವಕಾಶದಲ್ಲಿ ಗೋಲು ಬಾರಿಸಿದರು. ಕೊನೆಯ ಕ್ಷಣದವರೆಗೂ ಗೋಲು ಸಿಡಿಸುವ ತಮಿಳುನಾಡು ಆಸೆ ಫಲಿಸಲಿಲ್ಲ.
ಇನ್ನೊಂದು ಪಂದ್ಯದಲ್ಲಿ ತೆಲಂಗಾಣ 4-0ಯಿಂದ ಆಂಧ್ರ ಪ್ರದೇಶ ತಂಡವನ್ನು ಮಣಿಸಿತು.