ಭಾರತ ವನಿತೆಯರ ತಂಡ ಮೊನ್ನೆ ಆಂಗ್ಲರ ನಾಡಲ್ಲಿ 23 ವರ್ಷಗಳ ಬಳಿಕ ಐತಿಹಾಸಿಕ ಏಕದಿನ ಸರಣಿ ಗೆದ್ದು ಬೀಗಿದೆ.
ಮೂರನೆ ಪಂದ್ಯದಲ್ಲಿ 16 ರನ್ ಗಳ ಅಂತರದಿಂದ ಹರ್ಮನ್ ಪ್ರೀತ್ ಪಡೆ ಗೆದ್ದು ಕ್ಲೀನ್ ಸ್ವೀಪ್ ಮಾಡಿತು.ಆದರೆ ಆ ಪಂದ್ಯದಲ್ಲಿ ಮಂಕಡ್ ರನೌಟ್ ವಿಶ್ವ ಕ್ರಿಕೆಟ್ ನಲ್ಲಿ ಭಾರೀ ಚರ್ಚೆ ಆಗುವಂತೆ ಮಾಡಿತು. ಸ್ಪಿನ್ನರ್ ದೀಪ್ತಿ ಶರ್ಮಾ ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕ್ ನಲ್ಲಿದ್ದ ಚಾರ್ಲಿ ಡೀನ್ ಅವರನ್ನು ಮಂಕಡ್ ಶೈಲಿಯಲ್ಲಿ ರನೌಟ್ ಮಾಡಿದರು,
ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಚಾರ್ಲಿ ಡೀನ್ ತಮ್ಮ ತಪ್ಪುತಿದ್ದಿಕೊಳ್ಳುವುದಾಗಿ ಹೇಳಿದ್ದಾರೆ. ಕ್ರೀಸ್ ನಲ್ಲಿಯೇ ಇರಲು ಪ್ರತಿಜ್ಞೆ ಮಾಡಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ಆಡುವುದು ದೊಡ್ಡ ಗೌರವ ಎಂದಿದ್ದಾರೆ.
ಬೇಸಿಗೆ ಒಂದು ಕುತೂಹಲಕಾರಿ ಅಂತ್ಯವಾಗಿದೆ. ಇಂಗ್ಲೆಂಡ್ ತಂಡದ ಪರವಾಗಿ ಲಾರ್ಡ್ಸ್ ಮೈದಾನದಲ್ಲಿ ಆಡುವುದು ತುಂಬ ಗೌರವದ ವಿಚಾರ. ನಾನು ಮುಂದೆಯೂ ಕ್ರಿಸ್ ನಲ್ಲಿಯೇ ಉಳಿಯುತ್ತೇನೆ ಎಂದು ಭಾವಿಸುತ್ತೇನೆ ಎಂದು ಬರೆದಿದ್ದಾರೆ.
ಚಾರ್ಲಿ ಡೀನ್ರನ್ನು ಔಟ್ ಮಾಡುವ ಮುನ್ನ ಎಚ್ಚರಿಕೆ ನೀಡಲಾಗಿತ್ತು ಎಂದು ದೀಪ್ತಿ ಶರ್ಮಾ ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಹೀದರ್ ನೈಟ್
ಆಟ ಮುಗಿದಿದೆ ಚಾರ್ಲಿಯನ್ನು ನ್ಯಾಯಯುತವಾಗಿ ಔಟ್ ಮಾಡಲಾಗಿದೆ. ಭಾರತವು ಪಂದ್ಯ ಮತ್ತು ಸರಣಿಯನ್ನು ಜಯಿಸಲು ಅರ್ಹವಾಗಿದೆ.ದೀಪ್ತಿ ಶರ್ಮಾ ಚಾರ್ಲಿ ಡೀನ್ ಗೆ ಯಾವುದೇ ಎಚ್ಚರಿಕೆ ನೀಡಿರಲಿಲ್ಲ ಎಂದು ಸ್ಪಷ್ಟೆನೆ ನೀಡಿದ್ದಾರೆ.