ಟೀಮ್ ಇಂಡಿಯಾದಲ್ಲಿ (Team India) ನಡೆಯುವ ಒಂದೊಂದು ಆಯ್ಕೆಯೂ (Selection question)ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿರುತ್ತದೆ. ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಮೊಹಾಲಿಯಲ್ಲಿ (Mohali) ಆಸ್ಟ್ರೇಲಿಯಾ (Australia)ವಿರುದ್ಧದ ಸೋಲಿನ ನಂತರ ಹೊಸ ಪ್ರಶ್ನೆಯೊಂದು ಹುಟ್ಟು ಹಾಕಿದೆ. ಅಚ್ಚರಿಯಾಗಿ ತಂಡದಲ್ಲಿ ಕಾಣಿಸಿಕೊಂಡಿದ್ದ ಉಮೇಶ್ ಯಾದವ್ (Umesh Yadav ) ಆಯ್ಕೆಗೆ ಯಾವ ಆಂಗಲ್ನಿಂದಲೂ ಉತ್ತರ ಸಿಗುತ್ತಿಲ್ಲ.
ಅಂದಹಾಗೇ ಉಮೇಶ್ ಯಾದವ್ 2012ರಲ್ಲಿ ಟಿ20 ಕ್ರಿಕೆಟ್ಗೆ (T20 Cricket) ಪದಾರ್ಪಣೆ ಮಾಡಿದ್ದರು. ಕಳೆದ 10 ವರ್ಷಗಳಲ್ಲಿ ಉಮೇಶ್ ಟೀಮ್ ಇಂಡಿಯಾ ಪರ ಆಡಿರುವುದು ಕೇವಲ ಎಂಟೇ 8 ಪಂದ್ಯಗಳನ್ನು ಮಾತ್ರ. ಈ ಬಾರಿಯ ಟಿ20 ವಿಶ್ವಕಪ್ (T20 Worldcup) ತಂಡದಲ್ಲೂ ಉಮೇಶ್ಗೆ ಸ್ಥಾನವಿಲ್ಲ. ಆದರೆ ಆಸ್ಟ್ರೇಲಿಯಾ (Aus) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಉಮೇಶ್ ಆಡಿದ್ದಾರೆ. ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಜಸ್ಪ್ರಿತ್ ಬುಮ್ರಾ (Jasprit Bumrah) ಹೊರಗೆ ಕೂತಿದ್ದಾರೆ. ಸ್ಟ್ಯಾಂಡ್ ಬೈ ಬೌಲರ್ ದೀಪಕ್ ಚಹರ್ಗೂ (Deepak Chahar) ಅವಕಾಶವಿಲ್ಲ.
ಮೊಹಮ್ಮದ್ ಶಮಿ (Mohammad Shami) ಕೊರೊನಾ ಸೋಂಕಿಗೆ ಒಳಗಾದ ಕಾರಣ ಉಮೇಶ್ ಯಾದವ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಆರಂಭದಲ್ಲಿ ಉಮೇಶ್ ಕೇವಲ ರಿಪ್ಲೇಸ್ಮೆಂಟ್ ಪ್ಲೇಯರ್ ಎಂದೇ ನಂಬಲಾಗಿತ್ತು. ಆದರೆ ಟೀಮ್ ಇಂಡಿಯಾದ ನಿರ್ಧಾರ ಕೆಲವೊಮ್ಮೆ ಎದುರಾಳಿ ತಂಡಕ್ಕೆ ಮಾತ್ರವಲ್ಲ, ಅಭಿಮಾನಿಗಳಿಗೂ ಶಾಕ್ ನೀಡುತ್ತದೆ. ಈಗ ಮೊಹಾಲಿಯಲ್ಲಿ ಆಗಿರುವುದು ಕೂಡ ಅದೇ. ಉಮೇಶ್ ಯಾಕೆ ಆಡಿದರೂ ಅನ್ನುವುದು ಪಂದ್ಯ ಮುಗಿದು 24 ಗಂಟೆ ಕಳೆದರೂ ಉತ್ತರವಿಲ್ಲದ ಪ್ರಶ್ನೆಯಾಗಿದೆ.
ವಿಶ್ವಕಪ್ ತಂಡದಲ್ಲಿ ಸ್ಟ್ಯಾಂಡ್ ಬೈ ಆಟಗಾರನಾಗಿರುವ ದೀಪಕ್ ಚಹರ್ ಆಯ್ಕೆ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಜಸ್ಪ್ರಿತ್ ಬುಮ್ರಾ ಆಡುವುದಿಲ್ಲ ಎಂದಾದ ಮೇಲೆ ದೀಪಕ್ ಚಹರ್ ಫ್ರಂಟ್ ರನ್ನರ್ ಆಗಿದ್ದರು. ಆದರೆ ನಿರೀಕ್ಷೆ ಉಲ್ಟಾ ಆಯಿತು. ಚಹರ್ ಡ್ರೆಸ್ಸಿಂಗ್ ರೂಂನಲ್ಲೇ ಉಳಿದುಕೊಂಡರು. ಒಟ್ಟಿನಲ್ಲಿ ಉಮೇಶ್ ಆಯ್ಕೆ ಬಗ್ಗೆ ಬಹುಷಃ ಬಿಸಿಸಿಐ (BCCI) ಮತ್ತು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬಳಿಯೂ ಉತ್ತರವಿಲ್ಲ ಎಂದು ಅನಿಸುತ್ತಿದೆ.