ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕದನಕ್ಕೆ ಇನ್ನು ಮೂರು ದಿನ ಬಾಕಿ ಇದೆ. ಅಂತಿಮ ಮಹಾ ಕದನಕ್ಕೆ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಕಠಿಣ ಅಭ್ಯಾಸ ನಡೆಸುತ್ತಿದೆ.
ಆಸ್ಟ್ರೇಲಿಯಾ ಜೂ.7ರಿಂದ ಓವೆಲ್ನಲ್ಲಿ ನಡೆಯುವ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆಡುವ ಹನ್ನೊಂದರ ಬಳಗದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ನಾಯಕ ರೋಹಿತ ಶರ್ಮಾ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಳೆದು ತೂಗಿ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡಲಿದ್ದಾರೆ. 2021ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಅಂದು ಹೆಚ್ಚುವರಿ ವೇಗಿಯನ್ನು ಕಣಕ್ಕಿಳಿಸದೇ ಎಡವಟ್ಟು ಮಾಡಿತ್ತು.
ನ್ಯೂಜಿಲೆಂಡ್ ಐದು ವೇಗಿಗಳನ್ನು ಬಳಸಿ ಚಾಂಪಿಯನ್ಪಟ್ಟ ಪಡೆಯಿತು. ಆದರೆ ಈ ಬಾರಿ ಒಬ್ಬ ಸ್ಪಿನ್ನರ್ಗೆ ಮಾತ್ರ ಅವಕಾಶ ನೀಡಲು ಚಿಂತಿಸಿದೆ. ಆದರೂ ತಂಡಕ್ಕೆ ಅಗತ್ಯವೆನಿಸಿದರೆ ಆರ್.ಅಶ್ವಿನ್ ಮತ್ತು ಜಡೇಜಾ ಕಣಕ್ಕಿಳಿದರೆ ಅಚ್ಚರಿಪಡಬೇಕಿಲ್ಲ.
ಒವೆಲ್ ಮೈದಾನ ಸ್ಪಿನ್ನರ್ಗಳಿಗೆ ನೆರವು ನೀಡಲಿದ್ದು ಅಶ್ವಿನ್ಗೆ ಅವಕಾಶ ಕೊಡಬೇಕೆಂದು ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಓವೆಲ್ ಮೈದಾನದ ಪಿಚ್ ಆಧಾರದ ಮೇಲೆ ಇಬ್ಬರು ಸ್ಪಿನ್ನರ್ಗಳು ಆಯ್ಕೆ ನಡೆಯಲಿದೆ ಎನ್ನುತ್ತಾರೆ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್. ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಇಂಗ್ಲೆಂಡ್ನಲ್ಲಿ 7 ಟೆಸ್ಟ್ ಪಂದ್ಯಗಳಿಂದ 18 ವಿಕೆಟ್ ಪಡೆದಿದ್ದಾರೆ.
ರವೀಂದ್ರ ಜಡೇಜಾ 2022ರಲ್ಲಿ 4 ಟೆಸ್ಟ್ ಪಂದ್ಯಗಳಿಂದ 6 ವಿಕೆಟ್ ಪಡೆದಿದ್ದಾರೆ. ಆಲ್ರೌಂಡ್ ಪ್ರದರ್ಶನ ನೀಡುವ ಸಾಮಥ್ರ್ಯವಿರುವ ಕಾರಣ ರವೀಂದ್ರ ಜಡೇಜಾ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ರವೀಂದ್ರ ಜಡೇಜಾ ಚೆನ್ನೈ ತಂಡಕ್ಕೆ ಐಪಿಎಲ್ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದಾರೆ. 20 ವಿಕೆಟ್ಗಳನ್ನು ಪಡೆದು ಬೌಲಿಂಗ್ನಲ್ಲೂ ಗಮನ ಸೆಳೆದಿದ್ದಾರೆ.