ಪ್ರತಿಭಟನೆ ನಿರತ ಕುಸ್ತಿಪಟುಗಳ ಎಲ್ಲಾ ಬೇಡಿಕೆಯನ್ನು ಈಡೇರಿಸುವುದಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭರವಸೆ ನೀಡಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆಯಾದ ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.
ನಾವು ಸೂಕ್ಷ್ಮವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ. ಕುಸ್ತಿಪಟುಗಳು ಏನೆಲ್ಲಾ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೋ ಆ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆ. ಜತೆಗೆ ದೆಹಲಿ ಪೊಲೀಸರು ಒಂದು ಸಲ ಚಾರ್ಜ್ಶೀಟ್ ಸಲ್ಲಿಸಿದ ನಂತರ ಕ್ರಮ ಆಗುತ್ತದೆ.
ಯಾರೆಲ್ಲಾ ಈ ಪ್ರಕರಣವನ್ನು ರಾಜಕೀಯಗೊಳಿಸುತ್ತಿದ್ದಾರೋ ಅವರಿಗೆ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಲು ಬಯಸುತ್ತೇನೆ ಎಂದು ಸಚಿವ ಅನುರಾಗ್ ಠಾಕೂರ್ ಕಾಂಗ್ರೆಸ್ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.ಎಲ್ಲಾ ಕುಸ್ತಿಪಟುಗಳು ನಮಗೆ ಮುಖ್ಯ ಎಂದಿದ್ದರೆ.
ಕುಸ್ತಿಪಟುಗಳು ತನಿಖೆ ಮುಗಿಯುವವರೆಗೂ ಕಾಯಬೇಕು. ಎಲ್ಲಾ ರಾಜಕಾರಣಿಗಳು ತಮ್ಮ ಅಭಿಪ್ರಾಯವನ್ನು ಹೇಳುತ್ತಿದ್ದಾರೆ.ಎಲ್ಲಾ ಭಾರತೀಯರಿಗೆ ಕಾನೂನು ಒಂದೇ ಎಂದು ಹೇಳಲು ಬಯಸುವುದಾಗಿ ತಿಳಿಸಿದ್ದಾರೆ.
ಮೋದಿ ಸರ್ಕಾರ ಕ್ರೀಡೆಗೆ ಬಜೆಟ್ ಹೆಚ್ಚಿಸಿದೆ. ಅಥ್ಲೀಟ್ಗಳಿಗೆ ಪ್ರಧಾನಿಯವರು ಕೊಟ್ಟ ಗೌರವ ಗೊತ್ತಿಲ್ಲದ ವಿಚಾರವೆನಲ್ಲ ಎಂದಿದ್ದಾರೆ.
ರೈತರ ಮಹಾಪಂಚಾಯತ್ ಆಗ್ರಹ
ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಪ್ರತಿಟನಾ ಮೆರವಣಿಗೆ ವೇಳೆ ತಾರಾ ಕುಸ್ತಿಪಟುಗಳನ್ನು ಹೊಸ ಸಂಸತ್ಗೆ ಹೋಗದಂತೆ ತಡೆದು ಬಂಸಿದನ್ನು ರೈತರ ಮಹಾಪಂಚಾಯತ್ ಟೀಕಿಸಿದೆ.
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದರು. ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿದರು.
ನಾವು ನಮ್ಮ ಹೆಣ್ಣುಮಕ್ಕಳ ಜತೆ ದೃಢವಾಗಿ ನಿಂತಿದ್ದೇವೆ. ಅವರು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಬೇಕಾದ ಎಲ್ಲವನ್ನು ಮಾಡುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಮಂಗೇರಾಮ್ ತ್ಯಾಗಿ ಭರವಸೆ ನೀಡಿದ್ದಾರೆ.