ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಗೆಲುವಿನ ಖಾತೆ ತೆರೆಯಲು ಹೋರಾಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೆಣಸಾಡಲಿದೆ.
ಈಗಾಗಲೇ ಆಡಿದ 5 ಪಂದ್ಯಗಳಲ್ಲೂ ಸೋತಿರುವ ಸ್ಮೃತಿ ಮಂಧಾನಾ ಪಡೆ ಈ ಪಂದ್ಯವನ್ನು ಕೈಚೆಲ್ಲಿದರೆ ಪ್ಲೇ ಆಫ್ ಹಾದಿ ಮುಚ್ಚಲಿದೆ.
ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವ ಆರ್ಸಿಬಿ ಉಳಿದಿರುವ 3 ಪಂದ್ಯಗಳಲ್ಲಿ ಗೆದ್ದರೂ ಕಳಪೆ ನೆಟ್ ರನ್ ರೇಟ್ ಹೊಂದಿರುವ ಕಾರಣ ಪ್ಲೇ ಆಫ್ಗೇರುವುದು ಅನುಮಾನ.
ಉಳಿದಿರುವ ಪಂದ್ಯಗಳಲ್ಲಿ ಭಾರೀ ಅಂತರದಲ್ಲಿ ಆರ್ಸಿಬಿ ಗೆಲುವು ಕಾಣಬೇಕಿದೆ. ಜತೆಗೆ ಇತರೆ ತಂಡಗಳ ಫಲಿತಾಂಶ ಆರ್ಸಿಬಿ ಪರವಾಗಿ ಬಂದರೆ ಫ್ಲೇ ಆಫ್ಗೆ ಹೋಗಲು ಸಾಧ್ಯವಿದೆ.
ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಅಸಧಾರಣ ಪ್ರದರ್ಶನ ನೀಡಿದರಷ್ಟೆ ಗೆಲುವು ದಕ್ಕಲಿದೆ. ಯುಪಿ ವಿರುದ್ಧ ಆರ್ಸಬಿ 10 ವಿಕೆಟ್ ಗಳಿಂದ ಸೋಲು ಕಂಡಿದೆ.
ನಾಯಕಿ ಸ್ಮೃತಿ ಮಂಧಾನಾ ಒತ್ತಡದಲ್ಲಿ ಸಿಲುಕಿದವರಂತೆ ಕಂಡು ಬಂದಿದ್ದು ಬ್ಯಾಟಿಂಗ್ನಲ್ಲಿ ಯಶಸ್ಸು ಕಾಣುತ್ತಿಲ್ಲ.
ತಂಡದ ಭರವಸೆಯ ಆಟಗಾರ್ತಿಯರಾದ ಪರ್ರಿ, ರಿಚಾ, ಡಿವೈನ್, ಶ್ರೇಯಾಂಕ ತಂಡವನ್ನು ಗೆಲ್ಲಿಸಬೇಕಿದೆ.
ಇನ್ನು ಯುಪಿ ತಂಡ ಆಡಿದ 4 ಪಂದ್ಯಗಳಲ್ಲಿ 2ರಲ್ಲಿ ಗದ್ದಿದ್ದು ಈ ಪಂದ್ಯವನ್ನು ಗೆದ್ದು ಪ್ಲೇಆಫ್ ಸನಿಹಕ್ಕೆ ಹೋಗುವ ನಿರೀಕ್ಷೆಯಲ್ಲಿದೆ.