ನನ್ನಲ್ಲಿ ಇನ್ನು ಕ್ರಿಕೆಟ್ ಉಳಿದಿದೆ ಎಂದು ಆರ್ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಗುಜರಾತ್ ವಿರುದ್ಧ 7ನೇ ಐಪಿಎಲ್ ಶತಕ ಸಿಡಿಸಿದ ನಂತರ ಮಾತನಾಡಿದ ಕೊಹ್ಲಿ, ಜನರು ನನ್ನಲ್ಲಿ ಟಿ20 ಕ್ರಿಕೆಟ್ ಆಡಲು ಆಗುತ್ತಿಲ್ಲ ಎಂದು ಭಾವಿಸಿದ್ದಾರೆ. ಆದರೆ ನನಗೆ ಹಾಗೆ ಅನಿಸುತ್ತಿಲ್ಲ. ಚುಟಕು ಕ್ರಿಕೆಟ್ನಲ್ಲಿ ಇದು ನನ್ನ ಅತ್ಯುತ್ತಮ ಪ್ರದರ್ಶನವಾಗಿದೆ ಎಂದಿದ್ದಾರೆ.
ನಾನು ನನ್ನ ಆಟವನ್ನು ಆನಂದಿಸುತ್ತಿದ್ದೇನೆ. ನಾನು ಟಿ20 ಕ್ರಿಕೆಟ್ ಆಡುವುದೇ ಹೀಗೆ. ಹೆಚ್ಚು ಬೌಂಡರಿ ಹೊಡೆಯುತ್ತೇನೆ. ಪರಿಸ್ಥಿತಿ ನನಗೆ ಹೊಡೆಯಲು ಅವಕಾಶ ಕೊಡುತ್ತದೆ ಎಂದಿದ್ದಾರೆ.
ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪರಿಸ್ಥಿತಿ ಏನನ್ನು ಕೇಳುತ್ತದೋ ಅದನ್ನು ನಾವು ಕೊಡಬೇಕು. ನನಗೆ ನನ್ನ ಆಟ ಖುಷಿ ನೀಡಿದೆ ಎಂದು ಟೀಕಾಕಾರರಿಗೆ ತಿರುಗೇಟು ಕೊಟ್ಟರು.
ಕೊಹ್ಲಿ ಡೆಲ್ಲಿ ತಂಡಕ್ಕೆ ಹೋಗಲಿ: ಪೀಟರ್ಸನ್
ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೋಗಲಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಸಲಹೆ ನೀಡಿದ್ದಾರೆ. ಆರ್ಸಿಬಿ ಟೂರ್ನಿಯಿಂದ ಹೊರಬಿದ್ದ ನಂತರ ಪ್ರತಿಕ್ರಿಯಿಸಿದ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೋಗಲು ಒಳ್ಳೆಯ ಸಮಯ ಎಂದರು.2008ರಿಂದಲೂ ವಿರಾಟ್ ಕೊಹ್ಲಿ ಆರ್ಸಿಬಿ ಜತೆ ಇದ್ದಾರೆ.