19 ವಯೋಮಿತಿ ವಿಶ್ವಕಪ್ – ಭಾರತ ತಂಡ ಸೇರಿಕೊಳ್ಳಲಿರುವ ಐವರು ಆಟಗಾರರು ಇವ್ರೇ..!
19 ವಯೋಮಿತಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಭಾರತ ತಂಡದ ಆರು ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಹೀಗಾಗಿ ಹೆಚ್ಚುವರಿ ಆಟಗಾರರು ಇಲ್ಲದೆ ಸರಿಯಾಗಿ 11 ಮಂದಿ ಆಟಗಾರರು ಮಾತ್ರ ಇದ್ದಾರೆ.
ಹೀಗಾಗಿ ಬಿಸಿಸಿಐ ಹೆಚ್ಚುವರಿಯಾಗಿ ಐದು ಮಂದಿ ಆಟಗಾರರನ್ನು ಕೆರೆಬಿಯನ್ ಗೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ.
ಹೌದು, ಬಿಸಿಸಿಐ ಹೆಚ್ಚುವರಿಯಾಗಿ ಐದು ಮಂದಿ ಆಟಗಾರರನ್ನು ಕೆರೆಬಿಯನ್ ಗೆ ಕಳುಹಿಸಲು ನಿರ್ಧರಿಸಿದೆ. ಆಟಗಾರರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಿದ್ದಾರೆ. ಆರು ದಿನ ಕ್ವಾರೆಂಟೈನ್ ನಲ್ಲಿರುತ್ತಾರೆ. ಜನವರಿ 29ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಆಟಗಾರರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.
ಈಗಾಗಲೇ ಭಾರತ ಕಿರಿಯರ ತಂಡದ ಆರು ಮಂದಿ ಆಟಗಾರರು ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ರೂ ಮುನ್ನೆಚ್ಚೆರಿಕೆಯ ಕ್ರಮವಾಗಿ ಬಿಸಿಸಿಐ ಐದು ಮಂದಿ ಆಟಗಾರರನ್ನು ಕಳುಹಿಸುತ್ತಿದೆ.
ಉದಯ್ ಸಹಾರನ್, ಅಭಿಷೆಕ್ ಪೊರೆಲ್ (ವಿಕೆಟ್ ಕೀಪರ್), ರಿಶಿತ್ ರೆಡ್ಡಿ, ಆಂಶು ಗೋಸಾಯ್, ಪಿ.ಎಮ್. ಸಿಂಗ್ ರಾಥೋಡ್ ಅವರು ಭಾರತ ಕಿರಿಯರ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಈಗಾಗಲೇ ಭಾರತ ಕಿರಿಯರ ತಂಡ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಭಾನುವಾರ ಲೀಗ್ ನ ಕೊನೆಯ ಪಂದ್ಯವನ್ನು ಉಗಾಂಡ ವಿರುದ್ಧ ಆಡಲಿದೆ. ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧ ಜಯವನ್ನು ಸಾಧಿಸಿರುವ ಭಾರತ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ನಾಯಕ ಯಶ್ ಧೂಳ್, ಉಪನಾಯ ಎಸ್.ಕೆ. ರಷೀದ್ ಸೇರಿದಂತೆ ಆರು ಮಂದಿಗೆ ಮೊನ್ನೆ ಕೋವಿಡ್ ಸೋಂಕು ದೃಢಪಟ್ಟಿತ್ತು.