ಮೂರು ರಾಷ್ಟ್ರಗಳನ್ನೊಳಗೊಂಡ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಿ ಇಂದಿನಿಂದ ಮಣಿಪುರದಲ್ಲಿ ಆರಂಭವಾಗಲಿದೆ.
ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಟೂರ್ನಿ ಮಣಿಪುರದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಇಲ್ಲಿನ ಖುಮಾನ್ ಲಾಂಪಕ್ ಮೈದಾನದಲ್ಲಿ ಆತಿಥೇಯ ಭಾರತ, ಕಿರ್ಗಿಸ್ಥಾನ ಹಾಗೂ ಮ್ಯಾನ್ಮಾರ್ ಪ್ರಶಸ್ತಿಗಾಗಿ ಸೆಣಸಲಿವೆ.
ಇಂಡಿಯನ್ ಸೂಪರ್ ಲೀಗ್ನಲ್ಲಿ ಬೆಂಗಳೂರು ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದ ಸುನಿಲ್ ಚೆಟ್ರಿ ತಂಡದ ತಾರಾ ಆಟಗಾರರಾಗಿದ್ದಾರೆ.
2023ರ ಏಷ್ಯಾನ್ ಕಪ್ ದೃಷ್ಟಿಯಲ್ಲಿಟ್ಟುಕೊಂಡು ಕೋಚ್ ಐಗೊರ್ ಸ್ಟಿಮಾಕ್ ಯಾವುದನ್ನು ಪ್ರದರ್ಶನ ವಿಚಾರದಲ್ಲಿ ಯಾವುದನ್ನು ಹಗುರವಾಗಿ ಪರಿಗಣಿಸಿಲ್ಲ. ಯುವ ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಂಡು ದೊಡ್ಡ ಸವಾಲುಗಳನ್ನು ಎದುರಿಸಬೇಕಿದೆ. ಮ್ಯಾನ್ಮಾರ್ ವಿರುದ್ಧದ ಕದನದ ನಂತರ ಭಾರತ ಮಾ.28ರಂದು ಕಿರ್ಗಿಸ್ಥಾನ ವಿರುದ್ಧ ಸೆಣಸಲಿದೆ.