ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿ.ವಿ.ಸಿಂಧು, ಎಚ್.ಎಸ್.ಪ್ರಣಾಯ್ ಹಾಗೂ ಕಿದಂಬಿ ಶ್ರೀಕಾಂತ್ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಯುವ ಆಟಗಾರ ಮಿಥುನ್ ಮಂಜುನಾಥ್ ಎರಡನೆ ಸುತ್ತಿನಲ್ಲಿ ಸೋಲುವ ಮೂಲಕ ಸಿಂಗಲ್ಸ್ ವಿಆಭಗದಲ್ಲಿ ಭಾರತದ ಹೋರಾಟ ಅಂತ್ಯವಾಗಿದೆ.
ಹಾಲಿ ಚಾಂಪಿಯನ್ ಪಿ.ವಿ.ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದ ಎರಡನೆ ಸುತ್ತಿನಲ್ಲಿ ಎದುರಾಳಿ ಇಂಡೋನೇಷ್ಯಾದ ಪುತ್ರಿ ಕುಸುಮಾ ವಾರ್ದನಿ ವಿರುದ್ಧ 15-21, 21-12, 18-21 ಅಂಕಗಳಿಂದ ಸೋಲು ಕಂಡರು. ಇದರೊಂದಿಗೆ ಸಿಂಧು ಅವರ ಕಳಪೆ ಆಟ ಮುಂದುವರೆದಿದೆ.
ಪುರುಷರ ಸಿಂಗಲ್ಸ್ ನಲ್ಲಿ ಪ್ರಣಾಯ್ ಕ್ರಿಸ್ಟೊ ಪೊಪೊವ್ ವಿರುದ್ಧ 8-21,8-21 ಅಂಕಗಳಿಂದ ಸೋತರು .
ಮತ್ತೊಂದು ಸಿಂಗಲ್ಸ್ ನಲ್ಲಿ ಶ್ರೀಕಾಂತ್ ಹಾಂಗ್ ಕಾಂಗ್ನ ಚೆಕ್ ಲೀ ವಿರುದ್ಧ 22-20, 21-17 ಅಂಕಗಳಿಂದ ಸೋತರು.
ಯುವ ಆಟಗಾರ ಮಂಜುನಾಥ್ ಚೀನಾ ಥೈಪೈನ ಲೀ ವಿರುದ್ಧ 21-19, 21-10 ಅಂಕಗಳಿಂದ ಸೋತರು.
ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಚೀನಾದ ಫಾಂಗ್ ಚ್ಹಿಚ್ಹಿ ವಿರುದ್ಧ 12-21, 21-17, 28-26 ಅಂಕಗಳಿಂದ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.