ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಐದನೇ ಮತ್ತು ಅಂತಿಮ ಟಿ-20 ಪಂದ್ಯಕ್ಕೆ ಮಳೆ ಅಡ್ಡಿ ಪಡೆಸಿದ್ದು, ಪಂದ್ಯ ರದ್ದಾಗಿದೆ.
ಮೊದಲೆರೆಡು ಪಂದ್ಯ ಗೆದ್ದು ಬೀಗಿದ್ದ ದಕ್ಷಿಣ ಆಫ್ರಿಕಾ ನಂತರ ಎಡವಿತು. ಮೂರನೇ ಹಾಗೂ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯದ ಲಯಕ್ಕೆ ಮರಳಿತು. ಐದನೇ ಪಂದ್ಯದಲ್ಲಿ ಜಯ ಸಾಧಿಸಿ ದಾಖಲೆಯನ್ನು ಬರೆಯುವ ಟೀಮ್ ಇಂಡಿಯಾ ಆಸೆ ಫಲಿಸಲಿಲ್ಲ. ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆ, ರಿಷಭ್ ಪಂತ್ ಪಡೆಯ ಕಪ್ ಎತ್ತುವ ಆಸೆಗೆ ತಣ್ಣೀರು ಹಾಕಿದೆ.
ಐದು ಪಂದ್ಯಗಳ ಸರಣಿ ಸದ್ಯ 2-2ರಲ್ಲಿ ಸಮಬಲವಾಗಿದೆ. ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಇತಿಹಾಸ ಸೃಷ್ಟಿಸುವ ಅವಕಾಶವಿತ್ತು. ಇಲ್ಲಿಯವರೆಗೆ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಭಾರತ ತಂಡವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸುವ ಅವಕಾಶವನ್ನು ಕಳೆದುಕೊಂಡಿದೆ.
2015-16ರಲ್ಲಿ ಟಿ-20 ಸರಣಿ ಆಡಲು ದಕ್ಷಿಣ ಆಫ್ರಿಕಾ ಮೊದಲು ಭಾರತಕ್ಕೆ ಬಂದಿತ್ತು. 3 ಪಂದ್ಯಗಳ ಈ ಸರಣಿಯಲ್ಲಿ ಭಾರತ 2-0 ಅಂತರದಿAದ ಸೋಲನುಭವಿಸಬೇಕಾಯಿತು. ಕೊನೆಯ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದರ ನಂತರ ದಕ್ಷಿಣ ಆಫ್ರಿಕಾ ತಂಡವು 2019-20 ರಲ್ಲಿ ಟಿ-20 ಸರಣಿಯನ್ನು ಆಡಲು ಭಾರತಕ್ಕೆ ಬಂದಿತು. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ 3 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ಈ ಸರಣಿಯಲ್ಲೂ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಎಂ ಚಿನ್ನಸ್ವಾಮಿ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಕೇಶವ್ ಮಹಾರಾಜ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಟಾಸ್ ಆಗುತ್ತಿದ್ದಂತೆ ಮಳೆ ಆರಂಭವಾಗಿ ಪಂದ್ಯ ಸ್ಥಗಿತಗೊಂಡಿತು. ಕೊಂಚ ಸಮಯದ ನಂತರ ಮತ್ತೆ ಮಳೆ ನಿಂತಿದ್ದರಿAದ ಪಂದ್ಯವನ್ನು ಆರಂಭಿಸಲಾಯಿತು.
ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಇಶಾನ್ ಕಿಶನ್ ಪಂದ್ಯದ ಮೊದಲ ಓವರ್ನಲ್ಲೇ ಕೇಶವ್ ಮಹಾರಾಜ್ ಗೆ 2 ಅದ್ಭುತ ಸಿಕ್ಸರ್ಗಳನ್ನು ಬಾರಿಸಿದರು. ಇಶಾನ್ ಕಿಶನ್ ದೊಡ್ಡ ಇನ್ನಿಂಗ್ಸ್ ನ ಆಸೆ ಮೂಡಿಸಿದರು. ಆದರೆ ಇಶಾನ್ ಲುಂಗಿ ಎನ್ಗಿಡಿ ಅವರ ನಿಧಾನಗತಿಯ ಎಸೆತವನ್ನು ಅರ್ಥಮಾಡಿಕೊಳ್ಳಲಾಗದೆ ಕ್ಲೀನ್ ಬೌಲ್ಡ್ ಆದರು. ಅವರು ಔಟಾದ ನಂತರ, ಋತುರಾಜ್ ಗಾಯಕ್ವಾಡ್ ಕೂಡ ಎನ್ಗಿಡಿ ಅವರ ಇಂತಹದ್ದೇ ಎಸೆತದಲ್ಲಿ ಡ್ವೇನ್ ಪ್ರಿಟೋರಿಯಸ್ಗೆ ಕ್ಯಾಚ್ ನೀಡಿದರು. ಇಶಾನ್ ಬ್ಯಾಟ್ನಿಂದ 15 ರನ್ ಮತ್ತು ಗಾಯಕ್ವಾಡ್ ಬ್ಯಾಟ್ನಿಂದ 10 ರನ್ ಬಂದವು. 3.3 ಓವರ್ಗಳ ಆಟ ಸಾಗುತ್ತಿದ್ದಾಗ ಮತ್ತೆ ಮಳೆ ಪಂದ್ಯಕ್ಕೆ ಅಡ್ಡಿ ಪಡಿಸಿತು. ಈ ವೇಳೆಗೆ ಭಾರತ ಎರಡು ವಿಕೆಟ್ ಕಳೆದುಕೊಂಡು 28 ರನ್ ಸೇರಿಸಿತ್ತು. ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.