ಸ್ಟ್ರೆಸ್ ಫ್ರಾಕ್ಚರ್ ನಿಂದ ಚೇತರಿಸಿಕೊಂಡಿದ್ದು ಸಂಪೂರ್ಣ ಫಿಟ್ ಆಗಿರುವುದಾಗಿ ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಹೇಳಿದ್ದಾರೆ.
ಬ್ಯಾಡ್ಮಿಂಟನ್ ಏಷ್ಯಾ ಮಿಕ್ಸಡ್ ಟೀಮ್ ಚಾಂಪಿಯನ್ ಶಿಪ್ಗೆ ಸಜ್ಜಾಗಿರುವ ಪಿ.ವಿ.ಸಿಂಧು ಗಾಯದ ಸಮಸ್ಯೆ ಇಡೀ ವರ್ಷ ಕಾಡಿತು ಎಂದಿದ್ದಾರೆ.
ಕಳೆದ ವರ್ಷ ಬರ್ಮಿಂಗ್ ಹ್ಯಾಮ್ನಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟದ ಬಳಿಕ ಅಗ್ರ ಆಟಗಾರ್ತಿಯನ್ನು ಗಾಯದ ಸಮಸ್ಯೆಯಿಂದಾಗಿ ತೆರೆ ಹಿಂದೆ ಸರಿದಿದ್ದರು.
ಈ ವರ್ಷ ಮಲೇಷ್ಯಾ ಓಪನ್ ಟೂರ್ನಿ ಮೂಲಕ ತಂಡಕ್ಕೆ ಮರಳಿದ್ದರು. ಮೊದಲ ಸುತ್ತಿನಲ್ಲೆ ಅಗ್ರ ಆಟಗಾರ್ತಿ ಕಾರೊಲಿನಾ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದರು.
ನಂತರ ತವರಿನಲ್ಲಿ ನಡೆದ ಇಂಡಿಯನ್ ಓಪನ್ ಟೂರ್ನಿಯಲ್ಲೂ ಸಿಂಧು ಸೋತು ಹೊರಬಿದ್ದರು.
ನಾನೀಗ ಚೇತರಿಸಿಕೊಂಡಿದ್ದೇನೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಚೆನ್ನಾಗಿದ್ದೇನೆ. ಗಾಯದ ಸಮಸ್ಯೆ ಆಗುತ್ತವೆ. ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ತುಂಬ ಮುಖ್ಯ.
ಫೂಟ್ ವರ್ಕ್, ತಂತ್ರಗಾರಿಕೆ ಮತ್ತು ಹೊಡೆತಗಳು ಚೆನ್ನಾಗಿದೆ. ತುಂಬ ಕಠಿಣ ಸಂದರ್ಭದಲ್ಲಿ ತಂದೆ, ತಾಯಿ ಮತ್ತು ಸಹ ಅಥ್ಲೀಟ್ಗಳು ಧೈರ್ಯ ತುಂಬಿದ್ದಾರೆ ಎಂದು ಸಿಂಧು ನೆನೆದಿದ್ದಾರೆ.
ಮಂಗಳವಾರದಿಂದ ಆರಂಭವಾಗುವ ಟೂರ್ನಿಯಲ್ಲಿ ಸಿಂಧು, ಜತೆಗೆ ಲಕ್ಷ್ಯ ಸೇನ್ ಮತ್ತು ಎಚ್.ಎಸ್. ಪ್ರಣಯ್ ಕಣಕ್ಕಿಳಿಯಲಿದ್ದಾರೆ.