ಅಸ್ಥಿರ ಪ್ರದರ್ಶನ ನೀಡುತ್ತಿರುವ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ಧರ್ಮಾಶಾಲಾದಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಎರಡೂ ತಂಡಗಳು ಟೂರ್ನಿಯಲ್ಲಿ ಉಳಿಯಬೇಕಿದಲ್ಲಿ ಈ ಪಂದ್ಯವನ್ನು ಗೆಲ್ಲಬೇಕಾಗಿದೆ. ಪಂಜಾಬ್ ಕಿಂಗ್ಸ್ ಬೌಲಿಂಗ್ನಲ್ಲಿ ಸುಧಾರಿಸಿಕೊಳ್ಳಬೇಕು ಹಾಗು ರಾಯಲ್ಸ್ ತಂಡ ಬ್ಯಾಟಿಂಗ್ನಲ್ಲಿ ತಾಕತ್ತು ಪ್ರದರ್ಶಿಸಬೇಕಿದೆ.
ಪಂಜಾಬ್ ತಂಡಕ್ಕಿಂತ ರಾಜಸ್ಥಾನ ಒಳ್ಳೆಯ ನೆಟ್ ರನ್ ರೇಟ್ ಹೊಂದಿದೆ. ಆದರೆ ಪ್ರದರ್ಶನದ ಆಧಾರದ ಮೇಲೆ ಎರಡೂ ತಂಡಗಳ ಹಣೆಬರಹ ನಿರ್ಧಾರವಾಗಲಿದೆ.
ಪಂಜಾಬ್ ಕಿಂಗ್ಸ್ ತಂಡ ಈ ಹಿಂದಿನ ಆವೃತ್ತಿಗಳಂತೆ ಈ ಬಾರಿಯೂ ಕಳಪೆ ಪ್ರದರ್ಶನ ನೀಡುತ್ತಾ ಬಂದಿದ್ದು ಕಠಿಣ ಸಂದರ್ಭದಲ್ಲಿ ಎಡವುತ್ತಿದೆ. ಮುಖ್ಯವಾಗಿ ಪವರ್ಪ್ಲೇ ಹಾಗೂ ಡೆತ್ ಓವರ್ಗಳಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟಿದೆ. ಕಗಿಸೊ ರಬಾಡ, ಸ್ಯಾಮ್ ಕರ್ರನ್ ಮತ್ತು ಅರ್ಷದೀಪ್ ಪ್ರತಿ ಓವರ್ಗೆ 10 ರನ್ ಬಿಟ್ಟುಕೊಟ್ಟು ಒತ್ತಡ ಎದುರಿಸುತ್ತಿದ್ದಾರೆ.
ವೇಗಿ ರಬಾಡ ಲಯದಲ್ಲಿಲ್ಲ . ಮತ್ತೋರ್ವ ವೇಗಿ ಅರ್ಷದೀಪ್ ಅವರನ್ನು ಪವರ್ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ಬಳಸುತ್ತಿಲ್ಲಘಿ.ಡೆತ್ ಓವರ್ಗಳಲ್ಲಿ ಈ ಹಿಂದೆ ಯಾರ್ಕರ್ ಹಾಕಿ ಅರ್ಷದೀಪ್ ಗಮನ ಸೆಳೆದಿದ್ದರು.ಟೂರ್ನಿ ಆರಂಭದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಅರ್ಷದೀಪ್ ನಂತರ ದುಬಾರಿ ಬೌಲರ್ ಆದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 20ನೇ ಓವರ್ನಲ್ಲಿ ನಾಯಕ ಶಿಖರ್ `Àವನ್ ಸ್ಪಿನ್ನರ್ ಹರಪ್ರೀತ್ ಬ್ರಾರ್ ಕೊಟ್ಟು ಎಡವಟ್ಟು ಮಾಡಿಕೊಂಡರು. ಆ ಓವರ್ನಲ್ಲಿ ಹರಪ್ರೀತ್ ಬ್ರಾರ್ 23 ರನ್ ಕೊಟ್ಟರು. ಇದು ಪಂದ್ಯದ ಗತಿಯನ್ನ ಬದಲಾಯಿಸಿತು.
ಬ್ಯಾಟಿಂಗ್ನಲ್ಲಿ ನಾಯಕ ಶಿಖರ್ ಧವನ್ ಕಳೆದ ಎರಡು ಪಂದ್ಯಗಳಿಂದ ವಿಫಲರಾಗಿದ್ದಾರೆ. ಈ ಪಂದ್ಯದಲ್ಲಿ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ.
ರಾಜಸ್ಥಾನ ರಾಯಲ್ಸ್ ಟೂರ್ನಿಯ ಆರಂ`Àದಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದು ಬಲಿಷ್ಠ ತಂಡವಾಗಿ ಕಂಡಿತ್ತು. ಇದೀಗ ಸತತ ಸೋಲಿನ ಸುಳಿಯಲ್ಲಿ ಸಿಲುಕಿದೆ.
ಯಶಸ್ವಿ ಜೈಸ್ವಾಲ್ ಮತ್ತು ಯಜ್ವಿಂದರ್ ಚಾಹಲ್ ಅವರ ಅಮೋಘ ಪ್ರದರ್ಶನದ ಹೊರತಾಗಿಯೂ ತಂಡದ ಇತರೆ ಬ್ಯಾಟರ್ಗಳು ವೈಫಲ್ಯ ಅನುಭವಿಸಿದ್ದಾರೆ.
ಜೋಸ್ ಬಟ್ಲರ್ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ ಆದರೂ ಸ್ಥಿರ ಪ್ರದರ್ಶನ ಕಂಡು ಬಂದಿಲ್ಲಘಿ. ಕಳೆದ ಎರಡು ಪಂದ್ಯಗಳಲ್ಲಿ ಬೇಗನೆ ನಿರ್ಗಮಿಸಿರುವ ಇಂಗ್ಲೆಂಡ್ ಬ್ಯಾಟರ್ ಡು ಆರ್ ಡೈ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ.
ನಾಯಕ ಸಂಜು ಸ್ಯಾಮ್ಸನ್ ಬೌಲರ್ಗಳ ಬೆನ್ನಿಗೆ ನಿಂತಿದ್ದು ಮತ್ತೊಂದು ಕಠಿಣ ಸವಾಲು ಎದುರಿಸಲು ಸಜ್ಜಾಗಿದ್ದಾರೆ. ಟೂರ್ನಿಯಲ್ಲಿ ಸಿಹಿ ಕಹಿ ಎರಡನ್ನೂ ಅನುಭವಿಸಿರುವ ರಾಜಸ್ಥಾನ ರಾಯಲ್ಸ್ ಇಂದಿನ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ.