Rohit Injured ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಭ್ಯಾಸದ ವೇಳೆ ಗಾಯದಿಂದ ಪಾರಾದ ಘಟನೆ ಅಡಿಲೇಡ್ನಲ್ಲಿ ನಡೆದಿದೆ.
ಟೀಮ್ ಇಂಡಿಯಾ ನ.10ರಂದು ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ಕದನಕ್ಕೆ ಸಜ್ಜಾಗುತ್ತಿದೆ. ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ರೋಹಿತ್ ಶರ್ಮಾ ಅವರ ಬಲಗೈಗೆ ಚೆಂಡು ಬಡಿಯಿತು. ರೋಹಿತ್ ನೋವಿನಿಂದ ನರಳಿ ವಿಶ್ರಾಂತಿ ಪಡೆದರು. ಈ ಘಟನೆಯಿಂದ ರೋಹಿತ್ ಸ್ವಲ್ಪ ಗಲಿಬಿಲಿಗೊಂಡರು.
ಗಾಯಗೊಂಡ ಜಾಗಕ್ಕೆ ಐಸ್ ಪ್ಯಾಕ್ ಬಳಸಿದರು. ಗಂಭೀರ ಗಾಯವಲ್ಲದ ಕಾರಣ ರೋಹಿತ್ ಮತ್ತೆ ನೆಟ್ಸ್ ನಲ್ಲಿ ಅಭ್ಯಾಸ ಮಾಡಿದರು.
ನಾಯಕ ರೋಹಿತ್ ನೆದರ್ಲೆಂಡ್ ವಿರುದ್ಧ ಅರ್ಧ ಶತಕ ಸಿಡಿಸಿದ್ದು ಬಿಟ್ಟರೆ ದೊಡ್ಡ ಇನ್ನಿಂಗ್ಸ್ ಬಂದಿಲ್ಲ.
ಟೀಮ್ ಇಂಡಿಯಾ ಸೋಮವಾರ ಅಡಿಲೇಡ್ಗೆ ಬಂದಿಳಿಯಿತು. ಭಾರತ ಕ್ರಿಕೆಟ್ ಅಭಿಮಾನಿಗಳು ಸಂಗೀತದ ಮೂಲಕ ಟೀಮ್ ಇಂಡಿಯಾವನ್ನು ಸ್ವಾಗತಿಸಿದರು.